News Karnataka Kannada
Sunday, April 28 2024
ಮನರಂಜನೆ

ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಯದಲ್ಲಿ ನನಗೆ ಗೊತ್ತಲ್ಲದೇ ಕಣ್ಣೀರು ಸುರಿಸಿದ್ದೇನೆ

ರಾಮ ಜನ್ಮಭೂಮಿಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮಕ್ಕೆ ದೇಶದ ಮೂಲೆ, ಮೂಲೆಯಿಂದ ಆಗಮಿಸಿದ ಚಲನಚಿತ್ರ ನಟರು, ಗಣ್ಯಾತಿಗಣ್ಯರು ಶ್ರೀರಾಮನ ಆಶೀರ್ವಾದ ಪಡೆದಿದ್ದಾರೆ.
Photo Credit : News Kannada

ಅಯೋಧ್ಯೆ: ರಾಮ ಜನ್ಮಭೂಮಿಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮಕ್ಕೆ ದೇಶದ ಮೂಲೆ, ಮೂಲೆಯಿಂದ ಆಗಮಿಸಿದ ಚಲನಚಿತ್ರ ನಟರು, ಗಣ್ಯಾತಿಗಣ್ಯರು ಶ್ರೀರಾಮನ ಆಶೀರ್ವಾದ ಪಡೆದಿದ್ದಾರೆ.

ಇದೆ ಹಿನ್ನೆಲೆಯಲ್ಲಿ ನಟ, ರಾಜಕಾರಣಿ ಪವನ್ ಕಲ್ಯಾಣ್ ಅವರು ಇಂದು ಅಯೋಧ್ಯೆಗೆ ಭೇಟಿ ನೀಡಿದರು. ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಂಡ ಪವನ್ ಕಲ್ಯಾಣ್ ಭಾವುಕರಾಗಿದ್ದರು.

ಅಯೋಧ್ಯೆಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಪವನ್ ಕಲ್ಯಾಣ್ ಅವರು ನಾನು ಇವತ್ತು ತುಂಬಾ ಎಮೋಷನಲ್ ಆಗಿದ್ದೆ. ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಆಗುವ ಸಮಯದಲ್ಲಿ ನನಗೆ ಗೊತ್ತಲ್ಲದೇ ಕಣ್ಣೀರು ಸುರಿಸಿದ್ದೇನೆ ಎಂದರು. ಇಡೀ ದೇಶದ ಒಗ್ಗಟ್ಟಿನ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.

ರಾಮಮಂದಿರ ಕಟ್ಟಬೇಕು ಅನ್ನೋದು ಹಲವು ಶತಮಾನಗಳ ಹೋರಾಟದ ಕನಸು. ಆ ಕನಸು, ನೋವಿಗೆ ಸಾರ್ಥಕತೆ ಸಿಕ್ಕಿದ್ದು, ಇಂದು ಭಾರತ ದೇಶದ ಒಗ್ಗಟ್ಟಿನ ಪ್ರದರ್ಶನವಾಗಿದೆ. ದಕ್ಷಿಣ ಭಾರತೀಯರು ತಿರುಮಲಗೆ ಹೋಗುವ ಹಾಗೆ ಇನ್ನುಮುಂದೆ ಅಯೋಧ್ಯೆಗೂ ಭಕ್ತರು ಆಗಮಿಸುತ್ತಾರೆ.

ನಾನು ಅಯೋಧ್ಯೆಗೆ ಮತ್ತೆ ಬರುತ್ತೇನೆ. ಮುಂದಿನ ದಿನಗಳಲ್ಲಿ ನಾನು ಕೂಡ ಅಯೋಧ್ಯೆಗಾಗಿಯೇ ಏನಾದ್ರೂ ಮಾಡುತ್ತೇನೆ ಎಂದು ಪವನ್ ಕಲ್ಯಾಣ್ ತಿಳಿಸಿದ್ದಾರೆ.

ನಾಳೆಯಿಂದ ಸಾಮಾನ್ಯ ಜನರಿಗೆ ಅಯೋಧ್ಯೆ ರಾಮನ ದರ್ಶನ ಭಾಗ್ಯ ಸಿಗಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು