ಲಖ್ನೋ: ಖ್ಯಾತ ಕವಿ ಮುನವ್ವರ್ ರಾಣಾ(71) ಭಾನುವಾರ ಲಖ್ನೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಉರ್ದು ಕವಿ ರಾಣಾ 2014 ರಲ್ಲಿ ಅವರ ‘ಶಹದಬ’ ಕವಿತೆಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಅವರು 2012 ರಲ್ಲಿ ಉರ್ದು ಸಾಹಿತ್ಯಕ್ಕೆ ನೀಡಿದ ಸೇವೆಗಾಗಿ ಶಹೀದ್ ಶೋಧ ಸಂಸ್ಥಾನದಿಂದ ಮಾತಿ ರತನ್ ಸಮ್ಮಾನ್ ಪಡೆದರು. ರಾಣಾ ಅವರು ನವೆಂಬರ್ 26, 1952 ರಂದು ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಜನಿಸಿದರು. ಆದರೆ ಅವರು ತಮ್ಮ ಜೀವನದ ಬಹುಪಾಲು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಕಳೆದರು.
.