ನೋಯ್ಡಾ: ಉತ್ತರ ಪ್ರದೇಶದ ಐಟಿ ಕೇಂದ್ರವೆಂದು ಪರಿಗಣಿಸಲಾದ ನೋಯ್ಡಾ, ನಕಲಿ ಕಾಲ್ ಸೆಂಟರ್ಗಳಿಗೂ ತಾಣವಾಗಿ ಪರಿವರ್ತನೆಯಾಗುತ್ತಿದೆ ಎಂದು ವರದಿಗಳು ಹೇಳಿವೆ.
ಸೈಬರ್ ದರೋಡೆಕೋರರು ನಕಲಿ ಕಾಲ್ಸೆಂಟರ್ಗಳ ಮೂಲಕ ದೇಶದ ಸುರಕ್ಷತೆಗೆ ಅಪಾಯ ತಂದೊಡ್ಡುತ್ತಾರೆ. ಇಲ್ಲಿ ಸಿಕ್ಕಿಬಿದ್ದಿರುವ ನಕಲಿ ಕಾಲ್ ಸೆಂಟರ್ ಗಳ ಮಾಲೀಕರು ಯುವಕರಿಗೆ ತರಬೇತಿ ನೀಡಿ ಅತಿ ಕಡಿಮೆ ವೇತನಕ್ಕೆ ದುಡಿಮೆ ಮಾಡಿಕೊಂಡು ಅಪಾರ ಲಾಭ ಗಳಿಸುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳು ಆಗಾಗ್ಗೆ ಕೇಂದ್ರಗಳಿಗೆ ದಾಳಿ ಮಾಡುತ್ತಾರೆ. ಆದರೆ ಆ ವೇಳೆ ವಂಚಕ ಕಾಲ್ಸೆಂಟರ್ಗಳ ಮಾಸ್ಟರ್ ಮೈಂಡ್ ಪರಾರಿಯಾಗುವುದು ಸಾಮಾನ್ಯ.
ವಂಚನೆಯ ವಿವಿಧ ರೂಪ: ಈ ವಂಚನಾ ಜಾಲಕ್ಕೆ ವಿದೇಶಿಯರೂ ಬಲಿಯಾಗಿದ್ದಾರೆ. ಕಳೆದ ಐದು ವರ್ಷಗಳಲ್ಲಿ, ನೋಯ್ಡಾ ಮತ್ತು ಗ್ರೇಟರ್ ನೋಯ್ಡಾ ವೆಸ್ಟ್ನಲ್ಲಿ 250 ಕ್ಕೂ ಹೆಚ್ಚು ನಕಲಿ ಕಾಲ್ ಸೆಂಟರ್ಗಳು ಅಥವಾ ಟೆಲಿಫೋನ್ ಎಕ್ಸ್ಚೇಂಜ್ಗಳು ಪತ್ತೆಯಾಗಿವೆ. ಉದ್ಯೋಗ, ವಿಮೆ ಮತ್ತು ಆಧಾರ್, ಪಾನ್ ಲಿಂಕ್ ಹೆಸರಿನಲ್ಲಿ ಜನರನ್ನು ವಂಚಿಸುತ್ತಾರೆ. ಮೋಸದ ಕಾಲ್ ಸೆಂಟರ್ಗಳು ಸಾಮಾನ್ಯವಾಗಿ ನಿರುದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಉದ್ಯೋಗ ನೀಡುವುದಾಗಿ ಕರೆ ಮಾಡಿ ದ್ರೋಹ ಮಾಡುತ್ತವೆ. ಅಗ್ಗದ ಸಾಲ, ವಿಮಾ ಪಾಲಿಸಿ ನವೀಕರಣ ಇತ್ಯಾದಿ ಹೆಸರಿನಲ್ಲಿ ಜನರನ್ನು ವಂಚಿಸಲಾಗುತ್ತಿದೆ.
ಈ ಕುರಿತು ಐಎಎನ್ಎಸ್ ನೊಂದಿಗೆ ಮಾತನಾಡಿದ ಸೈಬರ್ ತಜ್ಞ ಅಮಿತ್ ದುಬೆ, ಅಂತರರಾಜ್ಯ ಗಡಿ ಪ್ರದೇಶಗಳು ಸೈಬರ್ ದರೋಡೆಕೋರರಿಗೆ ಇಂತಹ ಅಪರಾಧಗಳನ್ನು ಮಾಡಲು ಅನುಕೂಲಕರ ಸ್ಥಳಗಳಾಗಿವೆ. ಮೇವತ್, ಜಮ್ತಾರಾ, ನುಹ್, ಅಲ್ವಾರ್, ಮಥುರಾ ಮತ್ತು ನೋಯ್ಡಾ ಈ ವಂಚನೆಯ ಮುಖ್ಯಕೇಂದ್ರಗಳು ಎಂದು ತಿಳಿಸಿದ್ದಾರೆ. “ಸೈಬರ್ ಅಪರಾಧಿಗಳು ಬೇರೆ ಸ್ಥಳದಲ್ಲಿ ಕೆಲಸ ಮಾಡುತ್ತಾರೆ, ಬೇರೆ, ಬೇರೆ ಸ್ಥಳದಲ್ಲಿ ವಾಸಿಸುತ್ತಾರೆ ಸಿಕ್ಕಿಬೀಳುವ ಭಯ ಉಂಟಾದ ತಕ್ಷಣ ಬೇರೆ ರಾಜ್ಯಕ್ಕೆ ಪಲಾಯನ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ವಂಚಕರು ನಕಲಿ ಗುರುತು ಪತ್ರ ಹೊಂದಿರುವ ಕಾರಣ ಬಂಧನ ಕಾರ್ಯಾಚರಣೆ ಕಷ್ಟ ಎಂದು ತಿಳಿಸಿದ್ದಾರೆ. ನೋಯ್ಡಾದಲ್ಲಿ ನಕಲಿ ಕಾಲ್ ಸೆಂಟರ್ ಸುಲಭವಾಗಿ ಸ್ಥಾಪಿಸಬಹುದು. ಸಿಕ್ಕಿಹಾಕಿಕೊಳ್ಳುವ ಅಪಾಯವೂ ಕಡಿಮೆ ಎಂದು ಅವರು ತಿಳಿಸಿದ್ದಾರೆ. ಪಾಸ್ಪೋರ್ಟ್ ಪರಿಶೀಲನೆ ನೆಪದಲ್ಲಿಯೂ ವಂಚನೆ ನಡೆಸುತ್ತಾರೆ ಎಂದು ತಿಳಿಸಿದ್ದಾರೆ.