ಕಾನ್ಪುರ: 10 ವರ್ಷದ ಬಾಲಕನನ್ನು ಅಪಹರಿಸಿ ಗಂಗಾ ನದಿಯಲ್ಲಿ ಜೀವಂತವಾಗಿ ಎಸೆದ ಆರೋಪದ ಮೇಲೆ ಕಾನ್ಪುರದಲ್ಲಿ ನಾಲ್ವರನ್ನು ಬಂಧಿಸಲಾಗಿದೆ.
ಪೊಲೀಸ್ ವರದಿಗಳ ಪ್ರಕಾರ, ಕಂಟೋನ್ಮೆಂಟ್ ಪ್ರದೇಶದಲ್ಲಿರುವ ತನ್ನ ಮನೆಯಿಂದ ಆಟವಾಡಲು ಹೋಗಿದ್ದ ಅಪ್ರಾಪ್ತ ವಯಸ್ಕನನ್ನು ಎರಡು ದಿನಗಳ ಹಿಂದೆ ಅಪಹರಿಸಲಾಗಿತ್ತು.
ಅಪಹರಣಕಾರರು ಅವನ ತಂದೆಯನ್ನು ೬ ಲಕ್ಷ ರೂ.ಗಳ ಒತ್ತೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಆದರೆ ಅವನ ತಂದೆ ಪಾವತಿಸಲು ಸಾಧ್ಯವಿಲ್ಲ ಎಂದು ಹೇಳಿದಾಗ, ಅವರು ಹುಡುಗನನ್ನು ಹಿಂಸಿಸಿ ಜೀವಂತವಾಗಿ ಗಂಗಾ ನದಿಯಲ್ಲಿ ಎಸೆದಿದ್ದಾರೆ.
ಆರೋಪಿಗಳು ಅಪರಾಧವನ್ನು ಒಪ್ಪಿಕೊಂಡಿದ್ದಾರೆ.
ಜಂಟಿ ಪೊಲೀಸ್ ಆಯುಕ್ತ ಆನಂದ್ ಪ್ರಕಾಶ್ ತಿವಾರಿ ಮಾತನಾಡಿ, “ಬಾಲಕನನ್ನು ನದಿಗೆ ಎಸೆಯುವ ಮೊದಲು ಲೈಂಗಿಕ ದೌರ್ಜನ್ಯ ನಡೆದಿರುವ ಸಾಧ್ಯತೆ ಇದೆ. ಪೊಲೀಸರು ತನಿಖೆ ನಡೆಸುತ್ತಿದ್ದು, ನಾಲ್ವರನ್ನು ಬಂಧಿಸಿದ್ದಾರೆ.
ಚಾಲಕನಾಗಿ ಕೆಲಸ ಮಾಡುವ ಬಾಲಕನ ತಂದೆ, ಅಪಹರಣಕಾರರು 6 ಲಕ್ಷ ರೂ.ಗಳನ್ನು ಪಾವತಿಸಲು ಹೇಳಿದರು ಎಂದು ಹೇಳಿದರು. “ಇಷ್ಟು ದೊಡ್ಡ ಮೊತ್ತವನ್ನು ಪಾವತಿಸಲು ಅಥವಾ ವ್ಯವಸ್ಥೆ ಮಾಡಲು ನನಗೆ ಸಾಧ್ಯವಾಗುತ್ತಿಲ್ಲ ಎಂದು ನಾನು ಅವರಿಗೆ ಹೇಳಿದೆ” ಎಂದು ಅವರು ಹೇಳಿದರು.
ಅಪಹರಣಕಾರರು ಬಳಸಿದ ಸಂಖ್ಯೆಯ ಮೂಲಕ ಬಾಲು, ಅಮಿತ್, ಸಗೀರ್ ಮತ್ತು ಅಮೀನ್ ಎಂಬ ನಾಲ್ಕು ಜನರನ್ನು ಪತ್ತೆಹಚ್ಚಿ, ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಂಡುದ್ದಾರೆ.
ಮೊತ್ತವನ್ನು ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ಅವನ ತಂದೆ ಹೇಳಿದ ನಂತರ ಅವರು ಹುಡುಗನನ್ನು ಹಿಂಸಿಸಿದ್ದಾರೆ ಎಂದು ವಿಚಾರಣೆಯ ಸಮಯದಲ್ಲಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.