ಉತ್ತರ ಪ್ರದೇಶ: ದೇಶದಲ್ಲಿ ಎಲ್ಲಡೆ ನಾಯಕರ ಪ್ರಚಾರ ಭರ್ಜರಿಯಾಗಿ ಸಾಗುತ್ತಿದೆ. ಈ ಬಾರಿ ಪ್ರತೀ ನಾಯಕರು ಒಂದು ಹೊಸ ರೀತಿಯಲ್ಲಿ ಪ್ರಚಾರಕ್ಕೆ ತೆರಳುತ್ತಿದ್ದಾರೆ. ಜನರ ಮನಸ್ಸನ್ನು ಗೆಲ್ಲುವ ಪ್ರಯತ್ನದಲ್ಲಿದ್ದಾರೆ. ಇದೀಗ ಅಂತಹದ್ದೆ ಘಟನೆಯೊಂದು ನಡೆದಿದೆ.
ರಾಜ್ಯದ ಪಂಡಿತ್ ಕೇಶವ್ ದೇವ್ ತಮ್ಮಾದೆ ಆದ ಹೊಸ ರೀತಿಯಲ್ಲಿ ಪ್ರಚಾರಕ್ಕೆ ಹೊರಟಿದ್ದಾರೆ. ಪಂಡಿತ್ ಕೇಶವ್ ದೇವ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಚುನಾವಣಾ ಆಯೋಗವು ಅವರಿಗೆ ಜೋಡು ಸಂದಲು (ಚಪ್ಪಲಿ) ಚಿಹ್ನೆಯನ್ನು ನೀಡಿದೆ. ಇದರಿಂದಾಗಿ ಹೂವಿನ ಹಾರದೊಂದಿಗೆ ಚಪ್ಪಲಿಹಾರವನ್ನು ಹಾಕಿಕೊಂಡು ಈ ಮೂಲಕ ಜನರನ್ನು ಆಕರ್ಷಿಸಿದ್ದಾರೆ.
ತಮ್ಮ ಚುನಾವಣ ಚಿಹ್ನೆಯನ್ನು ಜನರು ಸುಲಭವಾಗಿ ನೆನೆಪಿಟ್ಟುಕೊಳ್ಳಲು 7 ಚಪ್ಪಲಿ ಹಾರವನ್ನು ಕೊರಳಿಗೆ ಕಾಕಿಕೊಂಡಿದ್ದಾರೆಂದು ಅವರ ಬೆಂಬಲಿಗರು ಹೇಳಿದ್ದಾರೆ. ಹಾಗಾಗಿ ಈ ವಿನೂತನ ಪ್ರಚಾರ ಎಷ್ಟರ ಮಟ್ಟಿಗೆ ಜನರನ್ನು ತಲುಪಿದೆ ಎನ್ನುವುದು ಏಪ್ರಿಲ್ 19 ರಂದು ನಡೆಯುವ ಚುನಾವಣೆ ಮತ್ತು ಜೂನ್ 4 ರಂದು ಹೊರಹೊಮ್ಮುವ ಪಿಲಿತಾಂಶದಿಂದ ತಿಳಿಯುತ್ತದೆ.
Aligarh, UP: Independent candidate from #Aligarh #PanditKeshavDev has been allotted 'slippers' as the #electionsymbol. After which, he was seen carrying out the #electioncampaign wearing a garland of 7 slippers around his neck. pic.twitter.com/605quGBke1
— Lokmat Times Nagpur (@LokmatTimes_ngp) April 9, 2024