ಲಕ್ನೋ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಈಗ ರಾಜ್ಯದಾದ್ಯಂತ ‘ಈಟ್ ರೈಟ್ ಮಿಲ್ಲೆಟ್ ಮೇಳ’ ನಡೆಸಲು ಚಿಂತಿಸಿದೆ.
ಲಕ್ನೋದಲ್ಲಿ ನಡೆದ ಸಿರಿಧಾನ್ಯ ಮೇಳ ಯಶಸ್ವಿಯಾಗಿದ್ದು, 60 ಕ್ಕೂ ಹೆಚ್ಚು ಸಿರಿಧಾನ್ಯ, ಅದರಿಂದ ತಯಾರಿಸಿದ ವಸ್ತುಗಳು ಹೆಚ್ಚಾಗಿ ಮಾರಾಟವಾಗಿದೆ. ಇದರಿಂದ ಸರ್ಕಾರ ಉತ್ತೇಜಿತವಾಗಿದ್ದು ರಾಜ್ಯಾದ್ಯಂತ ಮೇಳ ಆಯೋಜಿಸಲು ಯೋಚಿಸಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಆಖೆ ಹೆಚ್ಚುವರಿ ಆಯುಕ್ತ ಎಸ್.ಪಿ. ಸಿಂಗ್ ತಿಳಿಸಿದ್ದಾರೆ.