ಲಕ್ನೋ: ಇಲ್ಲಿನ ಎಸ್ಟಿಎಫ್ ಮತ್ತು ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋ (ಡಬ್ಲ್ಯುಸಿಸಿಬಿ) ಜಂಟಿ ತಂಡ ಕಾರ್ಯಾಚರಣೆ ನಡೆಸಿ 108 (ಇಂಡಿಯನ್ ರೂಫ್ ಟರ್ಟಲ್ಸ್) ಆಮೆಗಳನ್ನು ರಕ್ಷಿಸಿದೆ.
ಅಲ್ಲದೆ ಕಳ್ಳಸಾಗಣಿಕೆದಾರನ ಬಳಿಯಿದ್ದ ಎರಡು ಮೊಬೈಲ್ ಫೋನ್ ಮತ್ತು ಸ್ಕೂಟರ್ ಅನ್ನು ತಂಡ ವಶಪಡಿಸಿಕೊಂಡಿದೆ. ಆರೋಪಿ ರಿಂಕು ಕಶ್ಯಪ್ ಬಿಹಾರದ ಕಳ್ಳಸಾಗಾಣಿಕೆದಾರರೊಂದಿಗೆ ಸೇರಿ ಆಮೆಗಳನ್ನು ಸಾಗಾಟ ಮಾಡಲು ಯೋಜನೆ ಮಾಡಿದ್ದು, ಈ ವೇಳೆ ದಾಳಿ ನಡೆಸಿದ್ದ ತಂಡ ದುಷ್ಕರ್ಮಿಗಳನ್ನು ಬಂಧಿಸಿದೆ.
“ಗೋಮತಿ ನದಿಯ ತಟದ ಕಾಕೋರಿ ಮತ್ತು ಸೀತಾಪುರದ ಮೀನುಗಾರರಿಂದ ತಲಾ 200 ರೂ.ಗೆ ಆಮೆಗಳನ್ನು ಖರೀದಿಸಿದೆ ಎಂದು ಕಶ್ಯಪ್ ಹೇಳಿದ್ದಾರೆ. ಅವರು ಆಮೆಗಳನ್ನು ಬಂಗಾಳ, ಬಿಹಾರ, ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಆಮೆಗಳನ್ನುತಲಾ 300 ರೂ.ಗೆ ಮಾರಾಟ ಮಾಡಲು ಯೋಜನೆ ನಡೆಸಿದ್ದರು ಎಂದು ಅವರು ತಿಳಿಸಿದ್ದಾರೆ.
ವಿದೇಶಗಳಲ್ಲಿ ಆಮೆಗಳ ಮಾಂಸಕ್ಕೆ ಹೆಚ್ಚಿನ ಬೇಡಿಕೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಶ್ಚಿಮ ಬಂಗಾಳದ ಮೂಲಕ ವಿದೇಶಗಳಿಗೆ ಆಮೆಗಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.