News Karnataka Kannada
Thursday, May 02 2024
ಉತ್ತರ ಪ್ರದೇಶ

ಕಮಿಷನ್ ಗಳಿಸುವುದೇ ಪ್ರತಿಪಕ್ಷ ʻಇಂಡಿಯಾʼ ಬಣಗಳ ಗುರಿ : ಮೋದಿ ಟಾಂಟ್

ಬಿಜೆಪಿ ನೇತೃತ್ವದ ಎನ್‌ಡಿಎ ಮಿಷನ್‌ನಲ್ಲಿದ್ದಾಗ ಅಧಿಕಾರಕ್ಕೆ ಬಂದ ನಂತರ ಕಮಿಷನ್ ಗಳಿಸುವುದು ಪ್ರತಿಪಕ್ಷ ʻಇಂಡಿಯಾʼ ಬಣಗಳ ಗುರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ.
Photo Credit : NewsKarnataka

ಉತ್ತರ ಪ್ರದೇಶ: ಬಿಜೆಪಿ ನೇತೃತ್ವದ ಎನ್‌ಡಿಎ ಮಿಷನ್‌ನಲ್ಲಿದ್ದಾಗ  ಆ ಸಮಯದಲ್ಲಿ  ಅಧಿಕಾರಕ್ಕೆ ಬಂದ ನಂತರ ಕಮಿಷನ್ ಗಳಿಸುವುದು ಪ್ರತಿಪಕ್ಷ ʻಇಂಡಿಯಾʼ ಬಣಗಳ ಗುರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ.

ಚುನಾವಣೆ ರಾಜ್ಯದ ಸಹರಾನ್ಪುರ್ ನಗರದಲ್ಲಿ ರ್ಯಾಲಿ ಸಂದರ್ಭದಲ್ಲಿ ಮೋದಿ ಮಾತನಾಡಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 370ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದನ್ನು ತಡೆಯಲು ವಿಪಕ್ಷಗಳ ಮೈತ್ರಿಕೂಟ ಹೋರಾಟ ನಡೆಸುತ್ತಿದೆ ಎಂದರು.

“ಅದರ ಆಡಳಿತದ ಅವಧಿಯಲ್ಲಿ, ಕಾಂಗ್ರೆಸ್‌ನ ಗಮನವು ಕಮಿಷನ್ ಗಳಿಸುವುದರ ಮೇಲೆ ಇತ್ತು.ʻಇಂಡಿಯಾʼಮೈತ್ರಿಕೂಟವೂ ಅಧಿಕಾರಕ್ಕೆ ಬಂದ ನಂತರ ಕಮಿಷನ್ ಗಳಿಸುವ ಗುರಿಯನ್ನು ಹೊಂದಿದೆ ಆದರೆ ಎನ್‌ಡಿಎ ಮತ್ತು ಮೋದಿ ಸರ್ಕಾರವು ಒಂದು ಮಿಷನ್‌ನಲ್ಲಿದೆ” ಎಂದು ಪ್ರಧಾನಿ ಮೋದಿ ಟೀಕಿಸಿದ್ದಾರೆ.

"ಕಾಂಗ್ರೆಸ್ ತನ್ನ ಭದ್ರಕೋಟೆ ಎಂದು ಪರಿಗಣಿಸಲಾದ ಸ್ಥಾನಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಧೈರ್ಯವಿಲ್ಲ" ಎಂದು ಮತ್ತೆ ಟೀಕಿಸಿ ಮಾತನಾಡಿದರು. ಅಲ್ಲದೇ
ಕಾಂಗ್ರೆಸ್ ಪ್ರಣಾಳಿಕೆಯು ಮುಸ್ಲಿಂ ಲೀಗ್ ಮುದ್ರೆಯನ್ನು ಹೊಂದಿದೆ ಮತ್ತು ಅದರ ಭಾಗವು ಎಡಪಂಥೀಯರಿಂದ ಪ್ರಾಬಲ್ಯ ಹೊಂದಿದೆ ಎಂದು ಆರೋಪಿಸಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು