ಬಹ್ರೈಚ್: ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ಚಿರತೆಯೊಂದು ಏಳು ವರ್ಷದ ಬಾಲಕನ ಮೇಲೆ ದಾಳಿ ಮಾಡಿದ ಘಟನೆ ಕತರ್ನಿಯಾಘಾಟ್ ವನ್ಯಜೀವಿ ವಿಭಾಗದ ಮೋತಿಪುರ ಪೊಲೀಸ್ ವೃತ್ತದ ವ್ಯಾಪ್ತಿಯ ಮನೋಹರಪುರ್ವಾ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ.
ಬಾಲಕ ಲವಕುಶ್ ಯಾದವ್ ತನ್ನ ಅಕ್ಕ ದೀಪಾ ಅವರೊಂದಿಗೆ ಕಬ್ಬಿನ ಗದ್ದೆಗಳಿಂದ ಹಿಂದಿರುಗುತ್ತಿದ್ದಾಗ ಚಿರತೆ ದಾಳಿ ಮಾಡಿದೆ.
ಮೋತಿಪುರದ ಎಸ್ಎಚ್ಒ ಮುಖೇಶ್ ಸಿಂಗ್, ಕಬ್ಬಿಣ ಗದ್ದೆಗಳಿಂದ ಹಿಂದಿರುಗುತ್ತಿದ್ದಾಗ ಹುಡುಗನ ಮೇಲೆ ಚಿರತೆ ದಾಳಿ ಮಾಡಿದ್ದು ಆಕೆ ಅಕ್ಕ ದೀಪ ಗ್ರಾಮಸ್ಥರನ್ನು ಕರೆದಳು. ಅಷ್ಟೊತ್ತಿಗೆ ಆಗಲೇ ಚಿರತೆಯು ಹುಡುಗನ ಮೇಲೆ ತೀವ್ರವಾಗಿ ದಾಳಿ ಮಾಡಿ ಹುಡುಗ ಮೃತಪಟ್ಟಿದ್ದ ಎಂದು ಹೇಳಿದರು.
ಸ್ಥಳೀಯ ಪೊಲೀಸರು ಮತ್ತು ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಚಿರತೆ ದಾಳಿಯಲ್ಲಿ ಬಾಲಕ ಮೃತಪಟ್ಟಿದ್ದಾನೆ ಎಂದು ಕತರ್ನಿಯಾಘಾಟ್ ವಲಯದ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್ಒ) ಆಕಾಶ್ದೀಪ್ ಬದವಾನ್ ತಿಳಿಸಿದ್ದಾರೆ.
ಚಿರತೆ ಮತ್ತೆ ಗ್ರಾಮಕ್ಕೆ ಬರುವ ಸಾಧ್ಯತೆ ಇರುವುದರಿಂದ ಅರಣ್ಯ ಸಿಬ್ಬಂದಿ ಗಸ್ತು ತಿರುಗಲು ಸ್ಥಳಕ್ಕೆ ತಲುಪಿದ್ದಾರೆ ಎಂದು ಅವರು ಹೇಳಿದರು. ಈ ಪ್ರದೇಶದ ಗ್ರಾಮಸ್ಥರಿಗೆ ಗುಂಪುಗಳಲ್ಲಿ ಹೊರಹೋಗಲು ಸಲಹೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ನಾಲ್ಕು ವರ್ಷದ ಬಾಲಕ ಆದಿತ್ಯ ಮತ್ತು ನಂತರ ಒಂಬತ್ತು ವರ್ಷದ ಬಾಲಕ ರಾಮ್ತೇಜ್ ಅವರನ್ನು ಚಿರತೆ ಕೊಂದ ಈ ಪ್ರದೇಶದ ಮೂರನೇ ಪ್ರಕರಣ ಇದಾಗಿದೆ.