ಹರ್ದೋಯಿ: ತಡಿಯಾವಾ ಪ್ರದೇಶದ ದೇವರಿಯಾ ಗ್ರಾಮದಲ್ಲಿ ತಂಡಾಗಿ ಬದ್ದ ಹೈಟೆನ್ಷನ್ ತಂತಿಯಡಿ ಸಿಲುಕಿ ಇಬ್ಬರು ರೈತರು ವಿದ್ಯುತ್ ಸ್ಪರ್ಶಿದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ವೀರಪಾಲ್ (42) ಮತ್ತು ಸತ್ಯೇಂದ್ರ (22) ಸ್ಥಳದಲ್ಲೇ ಮೃತಪಟ್ಟದ್ದು,ದುರಂತದಿಂದ ಇಡೀ ಗ್ರಾಮದಲ್ಲಿ ಅತಂಕ ಶುರುವಾಗಿದೆ.
ವೀರಪಾಲ್ ಅವರ ಮಗ ಅನುರಾಗ್ (12) ಗೂ ಸುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ . ಚಿಕಿತ್ಸೆ ಮುಂದುವರೆದಿದ್ದು ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ರಾಜೇಶ್ ದ್ವಿವೇದಿ ತಿಳಿಸಿದ್ದಾರೆ.
ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಯಾಗಲಿದೆ ಎಂದು ಉತ್ತರ ಪ್ರದೇಶ ವಿದ್ಯುತ್ ಸಚಿವರು ತಿಳಿಸಿದ್ದಾರೆ.