ಗಾಜಿಪುರ : ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹಳೇನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಕಂದಾಯ ಅಧಿಕಾರಿಯೊಬ್ಬರನ್ನು (ಲೇಖಪಾಲ್) ಜಿಲ್ಲಾಡಳಿತ ಅಮಾನತುಗೊಳಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಾಜಿಪುರ ಜಿಲ್ಲೆಯ ಜಖಾನಿಯನ್ ತೆಹಸಿಲ್ನ ಒಡ್ರಾಯಿ ಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲೇಖಪಾಲ್ ಜಿತೇಂದ್ರನಾಥ್ ಸಿಂಗ್ ಅಮಾನತುಗೊಂಡ ಅಧಿಕಾರಿ. ಜಿತೇಂದ್ರಸಿಂಗ್ ನೀಡಿದ ಹೇಳಿಕೆ, ಸರ್ಕಾರಿ ಸೇವಾ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಜಖಾನಿಯನ್ ಉಪ ವಿಭಾಗಾಧಿಕಾರಿ ಸೂರಜ್ ಯಾದವ್ ತಿಳಿಸಿದ್ದಾರೆ. ಪ್ರಧಾನಿ ವಿರುದ್ಧ ನೀಡಿರುವ ಹೇಳಿಕೆ ಕುರಿತು ದೂರು ದಾಖಲಾಗಿದ್ದು, ಅದರ ಅನ್ವಯ ಜಿತೇಂದ್ರನಾಥ್ ವಿರುದ್ಧ ತನಿಖೆಗೆ ಆದೇಶಿಸಲಾಗಿತ್ತು. ಶುಕ್ರವಾರ ತನಿಖಾ ವರದಿ ತಲುಪಿತ್ತು. ವರದಿಯ ಅನ್ವಯ, ಲೇಖಪಾಲ್ ಅವರು ಸರ್ಕಾರಿ ಸೇವೆಯ ನಿಯಮಗಳನ್ನು ಉಲ್ಲಂಘಿಸಿರುವುದು ಸಾಬೀತಾಗಿರುವ ಕಾರಣ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಕರ್ತವ್ಯದಿಂದ ಅಮಾನತು ಮಾಡಲಾಗಿದೆ ಎಂದು ಉಪ ವಿಭಾಗಾದಿಕಾರಿ ಹೇಳಿದ್ದಾರೆ.
ಪ್ರಧಾನಿ ಯನ್ನೇ ನಿಂದಿಸಿದ ಉತ್ತರ ಪ್ರದೇಶ ಕಂದಾಯ ಅಧಿಕಾರಿ ಅಮಾನತು
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.