News Karnataka Kannada
Thursday, May 09 2024
ಉತ್ತರ ಪ್ರದೇಶ

ಕಾನ್ಪುರ: ವಿದ್ಯುತ್‌ ತಗುಲಿ ಲೈನ್‌ಮ್ಯಾನ್‌ ಮೃತ

Child Death
Photo Credit :

ಉತ್ತರ ಪ್ರದೇಶ:  ಉತ್ತರ ಪ್ರದೇಶದ ಕಾನ್ಪುರದಲ್ಲಿ ಪವರ್‌ ಕಟ್‌ ಮಾಡುತ್ತೇನೆ, ವಿದ್ಯುತ್‌ ಕಂಬ ಹತ್ತಿ ಸಮಸ್ಯೆ ಬಗೆಹರಿಸು ಎಂದು ಹೇಳಿದ ಹಿರಿಯ ಅಧಿಕಾರಿಯು ಪವರ್‌ ಕಟ್‌ ಮಾಡದ ಕಾರಣ ಕಂಬ ಹತ್ತಿದ ಲೈನ್‌ಮ್ಯಾನ್‌ ವಿದ್ಯುತ್‌ ಶಾಖ್‌ನಿಂದ ಮೃತಪಟ್ಟಿರುವ ಘಟನೆ  ನಡೆದಿದೆ.‌

ಬರ್ರಾ ಪ್ರದೇಶದ ನಿವಾಸಿಯಾಗಿರುವ ಲಖನ್‌ ದ್ವಿವೇದಿ ಅವರು ಮೃತ ಲೈನ್‌ಮ್ಯಾನ್‌ ಆಗಿದ್ದಾರೆ.ಫೆಬ್ರವರಿ 27ರಂದು ಬರ್ರಾ ಪ್ರದೇಶದಲ್ಲಿ ವಿದ್ಯುತ್‌ ಸಮಸ್ಯೆ ಉಂಟಾಗಿದ್ದು, ಲಖನ್‌ ದ್ವಿವೇದಿ ಅವರಿಗೆ ಮಾಹಿತಿ ಲಭ್ಯವಾಗಿದೆ. ಅದರಂತೆ, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸಿ, ನಾನು ಕಂಬ ಹತ್ತಿ ಪರಿಶೀಲಿಸುತ್ತೇನೆ ಎಂದಿದ್ದಾರೆ. ಇದಕ್ಕೆ ಹಿರಿಯ ಅಧಿಕಾರಿಗಳೂ ಒಪ್ಪಿದ್ದಾರೆ.

ಹಿರಿಯ ಅಧಿಕಾರಿಗಳು ಪವರ್‌ ಕಟ್‌ ಮಾಡಿದ್ದಾರೆ ಎಂದು ಕಂಬ ಹತ್ತಿದ ಲೈನ್‌ಮ್ಯಾನ್‌ಗೆ ವಿದ್ಯುತ್‌ ತಗುಲಿದ್ದು, ಶಾಕ್‌ನಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್‌ 2ರಂದು ಮೃತಪಟ್ಟಿದ್ದಾರೆ.

ಲಖನ್‌ ದ್ವಿವೇದಿ ಮೃತಪಡುವ ಮುನ್ನ ವಿಡಿಯೊ ಹೇಳಿಕೆಯೊಂದನ್ನು ನೀಡಿದ್ದು, ”ಹಿರಿಯ ಅಧಿಕಾರಿಗಳು ಪವರ್‌ ಕಟ್‌ ಮಾಡುತ್ತೇನೆ ಎಂದು ಹೇಳಿದ್ದರಾದರೂ ಕಟ್‌ ಮಾಡಿಲ್ಲ. ಹಾಗಾಗಿ ನನಗೆ ವಿದ್ಯುತ್‌ ತಗುಲಿದೆ,” ಎಂದು ಹೇಳಿದ್ದಾರೆ.

ಇನ್ನು ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಲಖನ್‌ ಮೃತಪಟ್ಟಿದ್ದಾರೆ ಎಂದು ಕುಟುಂಬದವರು ದೂರು ದಾಖಲಿಸಿದ್ದಲ್ಲದೆ, ನಿರ್ಲಕ್ಷ್ಯ ವಹಿಸಿದ ಅಧಿಕಾರಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಜತೆಗೆ 20 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಸಹ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು