ಉತ್ತರ ಪ್ರದೇಶ : ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಪ್ರವಾಸದಲ್ಲಿದ್ದು, 9 ವೈದ್ಯಕೀಯ ಕಾಲೇಜುಗಳನ್ನ ಉದ್ಘಾಟಿಸಿದ್ರು. ನಂತ್ರ ಸಿದ್ಧಾರ್ಥನಗರದಲ್ಲಿ ವೇದಿಕೆಯಿಂದ ಸಾರ್ವಜನಿಕರನ್ನ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಂದು ಆರೋಗ್ಯದ ಡಬಲ್ ಡೋಸ್ ಸಿಕ್ಕಿದೆ ಎಂದರು.
ಈ ಸಂದರ್ಭದಲ್ಲಿ, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ, ಒಂದು ದಿನದಲ್ಲಿ 9 ವೈದ್ಯಕೀಯ ಕಾಲೇಜುಗಳನ್ನು ತೆರೆಯುವುದು ಸಣ್ಣ ವಿಷಯವಲ್ಲ. ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗಳು ಈ ವೈದ್ಯಕೀಯ ಕಾಲೇಜುಗಳಿಂದ ಪ್ರಯೋಜನ ಪಡೆಯುತ್ತವೆ ಎಂದರು. ಇನ್ನು ಇದಕ್ಕೂ ಮುನ್ನ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಭಗವಾನ್ ಬುದ್ಧನ ವಿಗ್ರಹವನ್ನ ಉಡುಗೊರೆಯಾಗಿ ನೀಡಿದರು.
ಇದರ ನಂತರ, ಪ್ರಧಾನಿ ಮೋದಿ ಅವರು ಪ್ರಧಾನ ಮಂತ್ರಿಗಳ ಸ್ವಾವಲಂಬಿ ಆರೋಗ್ಯಕರ ಭಾರತ ಯೋಜನೆಯನ್ನು ವಾರಾಣಸಿಯಲ್ಲಿ ಮಧ್ಯಾಹ್ನ 1.15 ರ ಸುಮಾರಿಗೆ ಆರಂಭಿಸಲಿದ್ದು, ನಂತರ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ.