ಅಗರ್ತಲಾ: ಗಡಿ ಭದ್ರತಾ ಪಡೆ (ಬಿಎಸ್ಎಫ್) ಹವಾಲ್ದಾರ್ ಅವರನ್ನು ನಿಷೇಧಿತ ನ್ಯಾಷನಲ್ ಲಿಬರೇಷನ್ ಫ್ರಂಟ್ ಆಫ್ ತ್ರಿಪುರಾ (ಎನ್ ಎಲ್ ಎಫ್ ಟಿ) ಉಗ್ರಗಾಮಿಗಳು ಶುಕ್ರವಾರ ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ಅಗರ್ತಲಾದಲ್ಲಿ ತಿಳಿಸಿದ್ದಾರೆ.
ಉತ್ತರ ತ್ರಿಪುರಾ ಜಿಲ್ಲೆಯ ಭಾರತ-ಬಾಂಗ್ಲಾದೇಶ ಗಡಿಯ ಸಿಮಾನಾ 2 ರಲ್ಲಿ ಬಿಎಸ್ಎಫ್ ಗಸ್ತು ತಂಡದ ಮೇಲೆ ಎನ್ ಎಲ್ ಎಫ್ ಟಿ ಕಾರ್ಯಕರ್ತರು ಗುಂಡು ಹಾರಿಸಿದ್ದು, ಹವಾಲ್ದಾರ್ ಗ್ರಿಜೇಶ್ ಕುಮಾರ್ (53) ಗಾಯಗೊಂಡು ಅಗರ್ತಲಾ ಆಸ್ಪತ್ರೆಗೆ ಸ್ಥಳಾಂತರಿಸಿದ ನಂತರ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಪೊಲೀಸ್ ಮಹಾನಿರೀಕ್ಷಕ ಅರಿಂದಮ್ ನಾಥ್ ಮತ್ತು ಹಿರಿಯ ಬಿಎಸ್ಎಫ್ ಅಧಿಕಾರಿಗಳ ನೇತೃತ್ವದ ತ್ರಿಪುರಾ ರಾಜ್ಯ ರೈಫಲ್ಸ್ (ಟಿಎಸ್ಆರ್) ನ ಬೃಹತ್ ತುಕಡಿಯು ಮುಂದಿನ ಕ್ರಮಕ್ಕಾಗಿ ಪರ್ವತ ಪ್ರದೇಶಗಳಿಗೆ ಧಾವಿಸಿದೆ.
ಮಧ್ಯಪ್ರದೇಶ ಮೂಲದ ಹವಾಲ್ದಾರ್ ಹತ್ಯೆಗೀಡಾದ ವ್ಯಕ್ತಿ ಬಿಎಸ್ಎಫ್ 145 ಬೆಟಾಲಿಯನ್ಗೆ ಸೇರಿದದ್ದಾರೆ. ಶುಕ್ರವಾರದ ಈ ಘಟನೆ ಈ ವರ್ಷದ ಮೊದಲ ಭಯೋತ್ಪಾದಕ ಹಿಂಸಾಚಾರವಾಗಿದೆ.
ತ್ರಿಪುರಾ ಬಾಂಗ್ಲಾದೇಶದೊಂದಿಗೆ ೮೫೬ ಕಿ.ಮೀ ಅಂತರರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿದೆ.