ತೆಲಂಗಾಣ: ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಮದರ್ ತೆರೆಸಾ ಹೈಸ್ಕೂಲ್ನಲ್ಲಿ ಉದ್ರಿಕ್ತ ಗುಂಪು ಸ್ಕೂಲ್ಗೆ ನುಗ್ಗಿ ಹಾನಿ ಮಾಡಿರುವ ಘಟನೆ ನಡೆದಿದೆ.
ಶಾಲೆಗೆ ವಿದ್ಯಾರ್ಥಿಗಳು ಧಾರ್ಮಿಕ ಉಡುಗೆಯಲ್ಲಿ ಬಂದಿದ್ದರು, ಇದನ್ನು ಪ್ರಾಂಶುಪಾಲರು ಪ್ರಶ್ನೆ ಮಾಡಿದ್ದರು. ಇದಕ್ಕೆ ಆಕ್ರೋಶಗೊಂಡು, ಶಾಲೆ ಮೇಲೆ ದಾಳಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಹೈದರಾಬಾದ್ನಿಂದ 250 ಕಿಲೋ ಮೀಟರ್ ದೂರದ ಕನ್ನೆಪಳ್ಳಿ ಗ್ರಾಮದಲ್ಲಿರುವ ಮದರ್ ತೆರೆಸಾ ಹೈಸ್ಕೂಲ್ನಲ್ಲಿ ಈ ಘಟನೆ ನಡೆದಿದೆ.
ಎರಡು ದಿನಗಳ ಹಿಂದೆ ಕೆಲವು ವಿದ್ಯಾರ್ಥಿಗಳು ಕೇಸರಿ ಬಣ್ಣದ ಡ್ರೆಸ್ ತೊಟ್ಟುಕೊಂಡು ಸ್ಕೂಲ್ಗೆ ಬಂದಿದ್ದರು. ಇದನ್ನು ಗಮನಿಸಿದ್ದ ಕೇರಳ ಮೂಲದ ಪ್ರಿನ್ಸಿಪಾಲ್ ಜೈಮೊನ್ ಜೊಸೆಫ್, ವಿದ್ಯಾರ್ಥಿಗಳಿಗೆ ವಾರ್ನಿಂಗ್ ಕೊಟ್ಟಿದ್ದರಂತೆ. ಆಗ ವಿದ್ಯಾರ್ಥಿಗಳು ತಾವು 21 ದಿನಗಳ ಕಾಲ ಹನುಮಾನ್ ದೀಕ್ಷಾ ವೃತದಲ್ಲಿರೋದಾಗಿ ತಿಳಿಸಿದ್ದಾರೆ. ಅಷ್ಟಕ್ಕೂ ಸುಮ್ಮನಾಗದ ಪ್ರಿನ್ಸಿಪಾಲ್ ಪೋಷಕರನ್ನು ಕರೆದುಕೊಂಡು ಬರುವಂತೆ ಸೂಚಿಸಿದ್ದರು.
ಧಾರ್ಮಿಕ ಭಾವನೆಗಳಿಗೆ ದಕ್ಕೆ ತಂದ ಆರೋಪ ಮೇಲೆ ಸ್ಕೂಲ್ನ ಪ್ರಿನ್ಸಿಪಾಲ್ ಸೇರಿ ಇಬ್ಬರ ವಿರುದ್ಧ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಧಾರ್ಮಿಕ ಭಾವನೆಗಳನ್ನು ನೋಯಿಸಿದ ಆರೋಪ ಹಾಗೂ ವಿವಿಧ ಸಮುದಾಯದ ನಡುವೆ ದ್ವೇಷ ಉಂಟಾಗುವಂತೆ ಮಾಡಿದ ಆರೋಪಗಳ ಮೇಲೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
ಯಾರೋ ಒಬ್ಬರು ಇಲ್ಲಿನ ಪ್ರಿನ್ಸಿಪಾಲರು ಹಿಂದೂಗಳಿಗೆ ಶಾಲೆಯೊಳಗೆ ಬರಲು ಬಿಡುತ್ತಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿದುಬಿಟ್ಟಿದ್ದರು. ಬೆನ್ನಲ್ಲೇ, ಪರಿಸ್ಥಿತಿ ಉಲ್ಬಣಗೊಂಡಿತು. ಏಕಾಏಕಿ ಸ್ಕೂಲ್ಗೆ ನುಗ್ಗಿದ ಗುಂಪು, ಶಾಲೆಯ ಬಾಗಿಲು, ಕಿಟಗಿ ಮೇಲೆ ಅಟ್ಯಾಕ್ ಮಾಡಿದ್ದಾರೆ.
ಇದನ್ನು ತಪ್ಪಿಸಲು ಬಂದ ಶಾಲಾ ಸಿಬ್ಬಂದಿ ಜೊತೆ ವಾಗ್ವಾದ ನಡೆದಿದೆ.