ತೆಲಂಗಾಣ : ಆಗಸ್ಟ್ 15ರ ಒಳಗೆ ₹2 ಲಕ್ಷದವರೆಗಿನ ರೈತರ ಸಾಲ ಮನ್ನಾ ಮಾಡುವುದಾಗಿ ದೇವರ ಮೇಲೆ ಪ್ರಮಾಣ ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹೇಳಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿಯವರು ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿದ್ದು, ಅದರಂತೆ ಯಾದಾದ್ರಿ ಭುವನಗಿರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪರವಾಗಿ ಸಿಎಂ ರೇವಂತ್ ರೆಡ್ಡಿಯವರು ಭೋಂಗಿರಿ ನಗರದಲ್ಲಿ ರೋಡ್ ಶೋ ಮಾಡುತ್ತಿದ್ದರು. ಈ ವೇಳೆ ಸೇರಿದ್ದ ಜನರಿಗೆ ದೊಡ್ಡ ಭರವಸೆಯೊಂದನ್ನು ಸಿಎಂ ರೇವಂತ್ ರೆಡ್ಡಿ ಕೊಟ್ಟಿದ್ದಾರೆ.
ಈಗ ನಮ್ಮ ರೈತರಿಗೆ ಒಂದು ಮಾತು ಕೊಡುತ್ತಿದ್ದೇನೆ. ಯಾದಗಿರಿ ಬೆಟ್ಟದ ಲಕ್ಷ್ಮಿ ನರಸಿಂಹಸ್ವಾಮಿ ಮೇಲೆ ಆಣೆ ಮಾಡಿ, ಈ ಮಾತು ಹೇಳುತ್ತಿದ್ದೇನೆ. ಆಗಸ್ಟ್ 15ರ ಒಳಗೆ ₹2 ಲಕ್ಷದವರೆಗಿನ ರೈತರ ಸಾಲವನ್ನು ಮನ್ನಾ ಮಾಡುತ್ತೇನೆ.
ಸೂರ್ಯ ಉದಯಿಸಿವುದು ಬಿಟ್ರೇ, ಪ್ರಪಂಚ ತಲೆ ಕೆಳಗಾದರು, ಏನೇ ಆದ್ರೂ, ಯಾರು ಇದ್ದರೂ, ಯಾರೇ ಹೋದರೂ ಆಗಸ್ಟ್ 15ರ ಒಳಗೆ ₹2 ಲಕ್ಷದವರೆಗಿನ ರೈತರ ಸಾಲವನ್ನು ಸರ್ಕಾರ ಮನ್ನಾ ಮಾಡುತ್ತದೆ. ಇದರ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ ಎಂದು ರೈತರಿಗೆ ಭರವಸೆ ನೀಡಿದರು.