ಚೆನ್ನೈ: ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಪುತ್ರ ಹಾಗೂ ಡಿಎಂಕೆ ಸಚಿವ ಉದಯ ನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಪ್ರಗತಿಪರ ಲೇಖಕರು ಆಯೋಜಿಸಿದ್ದ ‘ಸನಾತನ ನಿರ್ಮೂಲನಾ ಸಮ್ಮೇಳನ’ದಲ್ಲಿ ಉದಯನಿಧಿ ಸ್ಟಾಲಿನ್ ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಅವರು, ‘ನೀವು ಈ ಕಾರ್ಯಕ್ರಮವನ್ನು ಸನಾತನ ವಿರೋಧಿ ಸಮ್ಮೇಳನ ಎನ್ನುವ ಬದಲು ಸನಾತನ ನಿರ್ಮೂಲನಾ ಸಮ್ಮೇಳನ ಎಂದು ಆಯೋಜಿಸಿದ್ದೀರಿ. ಇದಕ್ಕೆ ನನಗೆ ಬಹಳ ಇಷ್ಟವಾಯಿತು. ಕೆಲವು ವಿಚಾರಗಳನ್ನು ನಾವು ವಿರೋಧಿಸುವ ಬದಲು ಅವುಗಳನ್ನು ನಿರ್ಮೂಲನೆ ಮಾಡುವುದೇ ಸರಿ. ಸನಾತನ ಧರ್ಮವನ್ನೂ ನಾವು ವಿರೋಧಿಸುವ ಬದಲು ನಿರ್ಮೂಲನೆ ಮಾಡಬೇಕು’ ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದರು.
ಈ ಹೇಳಿಕೆ ದೇಶದಲ್ಲಿ ವಿರೋದಕ್ಕೆ ಕಾರಣವಾಗಿದೆ. ಆದರೆ ಈಗ ಇದೇ ಹೇಳಿಕೆಯನ್ನು ಇದೀಗ ಅವರ ತಂದೆ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಆಗಿರುವ ಎಂ.ಕೆ ಸ್ಟಾಲಿನವರು ಸಮರ್ಥಿಸಿಕೊಂಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ‘ಕೆಲವರು ಆಧ್ಯಾತ್ಮಿಕ ವೇದಿಕೆಗಳಲ್ಲಿ ಸ್ತ್ರೀಯರನ್ನು ಅವಹೇಳನ ಮಾಡುತ್ತಾರೆ ಮಹಿಳೆಯರು ಹೊರಗೆ ಹೋಗಿ ಕೆಲಸ ಮಾಡಬಾರದು’ ಎನ್ನುತ್ತಾರೆ.
ವಿಧವೆಯರು ಮರುಮದುವೆ ಆಗಬಾರದು ಎನ್ನುತ್ತಾರೆ. ಮರು ವಿವಾಹಕ್ಕೆ ಯಾವುದೇ ಆಚರಣೆ ಅಥವಾ ಪರಣವಿಲ್ಲ ಎನ್ನುತ್ತಾರೆ. ಮಹಿಳೆ ಮೇಲಿನ ದೌರ್ಜನ್ಯ ಶಾಶ್ವತವಾಗಿರಲು ಸನಾತನ ಪದ ಬಳಸುತ್ತಾರೆ. ಇಂತಹ ಸಿದ್ಧಾಂತಗಳ ವಿರುದ್ಧ ಪುತ್ರ ಉದಯ ನಿಧಿ ಧ್ವನಿಯೆತ್ತಿದ್ದಾರೆ ಎಂದು ಹೇಳಿದರು.
ಇಂತಹ ಮಹಿಳಾ ವಿರೋಧಿ ಅಸಮಾನತೆ ಅಳಿಸಬೇಕು ಎಂದು ಅವರು ಹೇಳಿದ್ದಾರೆ. ಇದನ್ನು ತಪ್ಪಾಗಿ ಉಲ್ಲೇಖಿಸಿ ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಹೀಗೆ ಆರೋಪಿಸಿ ಡಿಎಂಕೆ ಮುಳುಗಿಸಬಹುದು ಎಂದುಕೊಂಡರೆ ಅದು ಅಸಾಧ್ಯ ಎಂದು ಚೆನ್ನೈನಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾರ್ ಹೇಳಿದರು.