News Karnataka Kannada
Friday, May 10 2024
ತೆಲಂಗಾಣ

ಹೈದರಾಬಾದ್: 200ಕ್ಕೂ ಅಧಿಕ ಪೊಲೀಸರ ನಿದ್ದೆಗೆಡಿಸಿದ್ದ ಖತರ್ನಾಕ್ ಕಳ್ಳ ಬಂಧನ

Photo Credit : IANS

ಹೈದರಾಬಾದ್ : ಕಳ್ಳನೊಬ್ಬ ನಗರದೊಳಗೆ ನುಗ್ಗಿ ನಾಜೂಕಾಗಿ ಚಿನ್ನ ಎಗರಿಸಿ ಅಷ್ಟೇ ಸಲೀಸಲಾಗಿ ಪರಾರಿಯಾಗುತ್ತಿದ್ದ. ಈತನಿಗಾಗಿ ಪೊಲೀಸರು ಬಲೆ ಬೀಸಿದ್ದರೂ ಅವರ ಕೈಗೆ ಸಿಕ್ಕಿರಲಿಲ್ಲ. ಹೀಗಾಗಿ ಇಲ್ಲಿಯ ಕಮೀಷನರೇಟ್ ವ್ಯಾಪ್ತಿಯಲ್ಲಿ ತಂಡ ರಚನೆ ಮಾಡಿ ಈ ವ್ಯಕ್ತಿಗಾಗಿ ಹುಡುಕಾಟ ನಡೆಸಿದ್ದರು. ಕೊನೆಗೂ ಈ ಆಸಾಮಿ ಸಿಕ್ಕಿ ಬಿದ್ದಿದ್ದಾನೆ.

ಹೈದರಾಬಾದ್ ನ ಪೊಲೀಸರಿಗೆ ಕಳ್ಳನೊಬ್ಬ ತಲೆನೋವಾಗಿ ಪರಿಣಮಿಸಿದ್ದ. ಈ ವ್ಯಕ್ತಿ ನಗರಕ್ಕೆ ಹೇಗೆ ಬರುತ್ತಾನೆ ? ಆನಂತರ ಕಳ್ಳತನ ಮಾಡಿ ಹೇಗೆ ಪರಾರಿಯಾಗುತ್ತಾನೆ ? ಎಂಬುವುದೇ ತಿಳಿಯುತ್ತಿರಲಿಲ್ಲ. ಈತನ ಪತ್ತೆ ಹಚ್ಚಲು ಪೊಲೀಸರು ಸಾಕಷ್ಟು ಪ್ರಯತ್ನಿಸಿದ್ದರು. ಸುಮಾರು 200ಕ್ಕೂ ಅಧಿಕ ಪೊಲೀಸರು ಈತನನ್ನು ಹಿಡಿಯಲೇಬೇಕು ಎಂದು ಪಟ್ಟು ಹಿಡಿದವರಂತೆ ಹಗಲು – ರಾತ್ರಿ ಪ್ರಯತ್ನಿಸುತ್ತಿದ್ದರು. ಆದರೂ ಈತ ಮಾತ್ರ ತಲೆ ಮರೆಸಿಕೊಳ್ಳುತ್ತಿದ್ದ.

ಕೊನೆಗೂ ಈ ಖತರ್ನಾಕ್ ಕಳ್ಳ ಸಿಕ್ಕಿ ಬಿದ್ದಿದ್ದು, ಗುಜರಾತ್ ನ ಅಹಮದಾಬಾದ್ ನಲ್ಲಿ ಪೊಲೀಸರಿಗೆ ಸೆರೆಯಾಗಿದ್ದಾನೆ. ಈತ ಪ್ರತಿ ದಿನ ಸುಮಾರು 5 ಚಿನ್ನದ ಸರಗಳನ್ನು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ. ಚಿಕ್ಕವಯಸ್ಸಿನಿಂದಲೇ ಈತ ಈ ಖಯಾಲಿ ಶುರುವಿಟ್ಟಿದ್ದ ಎನ್ನಲಾಗಿದೆ.

ಇತ್ತೀಚೆಗೆ ಮಡದಿಗಾಗಿ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ. ಈ ಕಳ್ಳನನ್ನು ಉಮೇಶ್ ಖತಿಕ್ ಎಂದು ಗುರುತಿಸಲಾಗಿದೆ. ಹಲವು ಬಾರಿ ಈ ವ್ಯಕ್ತಿ ಕಳ್ಳತನದಿಂದಾಗಿ ಸಿಕ್ಕಿ ಹಾಕಿಕೊಂಡಿದ್ದ. ಆದರೆ, ಜಾಮೀನಿನ ಮೇಲೆ ಪ್ರತಿ ಬಾರಿ ಹೊರಗೆ ಬರುತ್ತಿದ್ದ. ಆದರೂ ತನ್ನ ಕೃತ್ಯ ಕೈ ಬಿಡದೆ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಹೈದರಾಬಾದ್ ಪೊಲೀಸರ ನಿದ್ದೆಗೆಡಿಸಿದ್ದ ಈ ವ್ಯಕ್ತಿ, ಅಲ್ಲಿ ತನ್ನ ಕೈ ಚಳಕ ತೋರಿಸಿ ಅಹಮದಾಬಾದ್ ನತ್ತ ಹೋಗಿದ್ದ. ಅಲ್ಲಿ ಸಿಕ್ಕಿಹಾಕಿಕೊಂಡಿದ್ದು, ಸದ್ಯ ಹೈದರಾಬಾದ್ ಪೊಲೀಸರು ತಮಗೆ ಒಪ್ಪಿಸುವಂತೆ ಮನವಿ ಮಾಡಿದ್ದಾರೆ. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಆತನನ್ನು ಒಪ್ಪಿಸಲು ಸಾಧ್ಯವಾಗುತ್ತಿಲ್ಲ. ಹಲವು ರಾಜ್ಯಗಳ ಪೊಲೀಸರಿಗೂ ಈ ವ್ಯಕ್ತಿ ಬೇಕು ಎನ್ನಲಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು