News Karnataka Kannada
Monday, May 06 2024
ತೆಲಂಗಾಣ

ಹೈದರಾಬಾದ್​: ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣು

Dead Body
Photo Credit :

ಹೈದರಾಬಾದ್​ : ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿರುವ ದುರಂತ ಘಟನೆ ತೆಲಂಗಾಣದ ಕರೀಮ್​ನಗರದಲ್ಲಿ ಸೋಮವಾರ (ಫೆ.7) ನಡೆದಿದೆ.

ಬೈರಿ ಶಂಕರಯ್ಯ (55) ಮತ್ತು ಜಮುನಾ (50) ದಂಪತಿ ಕರೀಮ್​ನಗರದ ಕಂಟಪಲ್ಲಿಯ ನಿವಾಸಿಗಳು. ಕೈಮಗ್ಗ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಓರ್ವ ಗಂಡು ಮಗನಿದ್ದಾನೆ. ಇದೀಗ ಶಂಕರಯ್ಯ ಮತ್ತು ಜಮುನಾ ದಂಪತಿ ಮಗ ಶ್ರೀಧರ್ (25)​ ಜತೆಗೂಡಿ ತಮ್ಮ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇಬ್ಬರು ಹೆಣ್ಣು ಮಕ್ಕಳಿಗೂ ಈಗಾಗಲೇ ಮದುವೆ ಮಾಡಿಕೊಡಲಾಗಿದೆ. ಕಿರಿಯ ಮಗಳಿಗೆ ಮೂರು ತಿಂಗಳ ಹಿಂದಷ್ಟೇ ಅದ್ಧೂರಿಯಾಗಿ ಮದುವೆ ಆಗಿತ್ತು. ಇದೀಗ ಮೂವರು ಸಾವಿಗೀಡಾಗಿದ್ದು, ಹೆಣ್ಣು ಮಕ್ಕಳಿಗೆ ತವರು ಮನೆ ಶಾಶ್ವತವಾಗಿ ಇಲ್ಲದಂತಾಗಿದೆ. ಸಾಲದ ಸುಳಿಯಲ್ಲೇ ಸಿಲುಕಿದ್ದೇ ಸಾವಿಗೆ ಕಾರಣ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು