ಚೆನ್ನೈ: ಚುನಾವಣಾ ಪ್ರಚಾರದ ಪ್ರಯುಕ್ತ ತಮಿಳುನಾಡು ತಲುಪಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ʼಅಣ್ಣಾಮಲೈ ಯಾರುʼ ಎಂದು ಎಂದು ಕೇಳಿದ ಡಿಎಂಕೆ ಪಕ್ಷಕ್ಕೆ ರಾಜ್ಯದ ಜನ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡುತ್ತಾರೆ ಎಂದರು.
ʼಅಧಿಕಾರದ ಅಹಂಕಾರದಲ್ಲಿ ಮುಳುಗಿರುವ ಪಕ್ಷ ಡಿಎಂಕೆʼ ಎಂದು ಆರೋಪಿಸಿರುವ ಮೋದಿ, ʼನಮ್ಮ ಯುವ ನಾಯಕ ಅಣ್ಣಾಮಲೈ ಬಗ್ಗೆ ಕೇಳಿದಾಗ ಅದು ಯಾರು ಎಂದು ಡಿಎಂಕೆ ನಾಯಕ ಅಹಂಕಾರದಿಂದ ಮಾತನಾಡಿದ್ದಷ್ಟೇ ಅಲ್ಲದೆ ಅಪಮಾನಕರ ಪದಗಳ ಪ್ರಯೋಗ ಮಾಡಿದರು. ಇದು ತಮಿಳುನಾಡಿದ ಸಂಸ್ಕೃತಿಯ ವಿರುದ್ಧವಾಗಿದೆʼ ಎಂದರು.
ಪೋಲಿಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಒಬ್ಬ ಯುವ ನಾಯಕನ ಬಗ್ಗೆ ಬಳಸಲಾಗಿರುವ ಪದಗಳು ಡಿಎಂಕೆ ಪಕ್ಷದ ಅಸಲಿಯತ್ತನ್ನು ತೋರಿಸುತ್ತದೆ. ಕುಟುಂಬ ರಾಜಕಾರಣ ಮಾಡುವ ಜನ ಯುವಕರನ್ನು ಮುಂದುವರಿಯುವುದರಿಂದ ತಡೆಯುತ್ತಾರೆ ಎಂದು ಮೋದಿ ಆರೋರಿಸಿದ್ದಾರೆ.