ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪ್ರಧಾನಿ ನರೇಂದ್ರ ಮೋದಿಯನ್ನು ವಲಸೆ ಹಕ್ಕಿಗೆ ಹೋಲಿಸಿದ್ದು, ಚುನಾವಣೆಯ ಸಮಯದಲ್ಲಿ ಮಾತ್ರ ಇತ್ತ ಬರುತ್ತಾರೆ ಎಂದು ಆರೋಪಿಸಿದ್ದಾರೆ. ಜೊತೆಗೆ ಕೆಲ ಸವಾಲುಗಳನ್ನೆಸೆದು ಅವುಗಳನ್ನು ಪೂರೈಸುವ ಭರವಸೆ ನೀಡುವಂತೆ ಕೇಳಿದ್ದಾರೆ.
ಚೀನಾ ಆಕ್ರಮಿಸಿಕೊಂಡಿರುವ ಪ್ರದೇಶಗಳನ್ನು ಮರಳಿ ಭಾರತಕ್ಕೆ ಸೇರಿಸಿಕೊಳ್ಳುವುದರಿಂದ ಹಿಡಿದು ಚುನಾವಣಾ ಬಂಡ್ಗಳ ಮುಕ್ತ ತನಿಖೆಯ ತನಕ ಕೆಲ ಭರವಸೆಗಳನ್ನು ನೀಡುವಂತೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ಸವಾಲೆಸೆದಿದ್ದಾರೆ.
ಜಾತಿಗಣತಿ, ಮೀಸಲಾತಿಗಳ ಕಟ್ಟುನಿಟ್ಟಾದ ಪಾಲನೆ, ತಮಿಳುನಾಡಿನಲ್ಲಿ NEET ಪರೀಕ್ಷೆ ರದ್ದು, ಹಿಂದಿ ಹಾಗು ಸಂಸೃತಗಳನ್ನು ಹೇರದೇ ಇರುವುದು, ಶಿಕ್ಷಣವನ್ನು ರಾಜ್ಯ ಪಟ್ಟಿಗೆ ಸೇರಿಸಿ ಸಾಲ ಮನ್ನಾ ಮಾಡುವುದು, ೨ ಕೋಟಿ ಯುವಕರಿಗೆ ಉದ್ಯೋಗ, ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿ, ಪೆಟ್ರೋಲ್, ಡೀಸಲೆ, ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ, ಜಾರಿ ನಿರ್ದೇಶನಾಲಯ, ಆದಾಯ ಇಲಾಖೆ ಹಾಗು CBIಗಳ ಸ್ವತಂತ್ರ ಕಾರ್ಯನಿರ್ವಹಣೆ, ರಾಜ್ಯಗಳಿಗೆ ಸಮರ್ಪಕ ನಿಧಿ ಹಂಚಿಕೆ, ಬಿಜೆಪಿಯಲ್ಲಿ ಭ್ರಷ್ಟಾಚಾರದ ಕುರಿತು ಪಾರದರ್ಶಕ ತನಿಖೆ, ವಾಕ್ ಸ್ವಾತಂತ್ರ್ಯ, ಅಗ್ನಿಪಥ ರದ್ದತಿ, ಚೆನ್ನೈ ಮೆಟ್ರೋ ಕಾಮಗಾರಿಗೆ ನಿಧಿ ಬಿಡುಗಡೆ, ತಮಿಳನ್ನು ಭಾರತದ ಅಧಿಕೃತ ಭಾಷೆಯನ್ನಾಗಿಸುವುದು, ಪೌರತ್ವ ತಿದ್ದುಪಡಿ ಕಾಯ್ದೆಯ ಹಿಂಪಡೆಯುವಿಕೆ ಸೇರಿದಂತೆ ಸ್ಟಾಲಿನ್ ಒಟ್ಟು ೨೧ ಭರವಸೆಗಳನ್ನು ಪಟ್ಟಿ ಮಾಡಿ, ಇವುಗಳನ್ನು ಪೂರೈಸುವ ಭರವಸೆಯನ್ನು ಕೊಡುತ್ತೀರಾ? ಎಂದು ಮೋದಿಯನ್ನು ಪ್ರಶ್ನಿಸಿದ್ದಾರೆ.