ಶ್ರೀಪೆರಂಬುದೂರ್: ಭಾರತ ಜೋಡೋ ಯಾತ್ರೆಗೆ ಚಾಲನೆ ನೀಡುವ ಮುನ್ನ ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿರುವ ತಮ್ಮ ತಂದೆಯ ಸ್ಮಾರಕಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಜತೆಗೆ ಗೌರವ ಸಲ್ಲಿಸಿದ ನಂತರ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದ್ವೇಷದ ರಾಜಕೀಯದಿಂದಾಗಿ ತಮ್ಮ ತಂದೆಯನ್ನು ಕಳೆದುಕೊಂಡಿದ್ದೇನೆ, ಆದರೆ ಅದಕ್ಕೆ ದೇಶವನ್ನು ಕಳೆದುಕೊಳ್ಳುವುದಿಲ್ಲ ಎಂದು ಹೇಳಿದರು.
“ದ್ವೇಷ ಮತ್ತು ವಿಭಜನೆಯ ರಾಜಕೀಯದಿಂದ ನಾನು ನನ್ನ ತಂದೆಯನ್ನು ಕಳೆದುಕೊಂಡಿದ್ದೇನೆ. ನಾನು ನನ್ನ ಪ್ರೀತಿಯ ದೇಶವನ್ನು ಸಹ ಅದಕ್ಕಾಗಿ ಕಳೆದುಕೊಳ್ಳುವುದಿಲ್ಲ. ಪ್ರೀತಿ ದ್ವೇಷವನ್ನು ಗೆಲ್ಲುತ್ತದೆ. ಭರವಸೆ ಭಯವನ್ನು ಸೋಲಿಸುತ್ತದೆ. ಒಟ್ಟಾಗಿ, ನಾವು ಜಯಿಸುತ್ತೇವೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
1991ರ ಮೇ 21ರಂದು ಶ್ರೀಪೆರಂಬುದೂರಿನಲ್ಲಿ ಹತ್ಯೆಗೀಡಾದ ತಮ್ಮ ತಂದೆ, ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರಿಗೆ ರಾಹುಲ್ ಗಾಂಧಿ ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ರಾಹುಲ್ ಗಾಂಧಿ ತಮ್ಮ ಯಾತ್ರೆಯನ್ನು ಪ್ರಾರಂಭಿಸಲು ಕನ್ಯಾಕುಮಾರಿಗೆ ತೆರಳಿದ್ದಾರೆ.
ಪಕ್ಷದ ವಕ್ತಾರ ಶಮಾ ಮೊಹಮ್ಮದ್ ಮಾತನಾಡಿ, “ಗಾಂಧಿ, ವಿವೇಕಾನಂದ ಮತ್ತು ತೈರಿವುಲ್ಲೂರ್ ಸಹಿಷ್ಣುತೆಯ ಪರವಾಗಿದ್ದರು ಮತ್ತು ಈ ಸ್ಥಳವು ದೇಶದ ದಕ್ಷಿಣದ ತುದಿಯಾಗಿದೆ.
ವೋಲ್ವೊ ಬಸ್ ಗಳಲ್ಲಿ ಅವರು ಯಾತ್ರೆಗಳನ್ನು ಮಾಡಿರುವುದರಿಂದ ಅವರು ಈ ಯಾತ್ರೆಯ ಬಗ್ಗೆ ಚಿಂತಿತರಾಗಿದ್ದಾರೆ ಆದರೆ ಈ ಯಾತ್ರೆಯು ಜನರನ್ನು ಸಂಪರ್ಕಿಸುತ್ತದೆ ಎಂದು ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಹಣದುಬ್ಬರ ಮತ್ತು ಕೋಮುವಾದಿ ಧ್ರುವೀಕರಣದ ಬಗ್ಗೆ ಜನರಿಗೆ ತಿಳಿಸಲಾಗುವುದು ಎಂದು ಕಾಂಗ್ರೆಸ್ ನಾಯಕ ಹೇಳಿದರು.