ಚೆನ್ನೈ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಲು ಪ್ರಮುಖ ಪಾತ್ರವಹಿಸಿದ್ದ ಕರ್ನಾಟಕ ಕೇಡರ್ನ ಮಾಜಿ ಐಎಎಸ್ ಅಧಿಕಾರಿ ಶಶಿಕಾಂಥ್ ಸೆಂಥಿಲ್ ಅವರು ತಮಿಳುನಾಡು ಕಾಂಗ್ರೆಸ್ ಘಟಕದ ಮುಖ್ಯಸ್ಥರಾಗುವ ಸಾಧ್ಯತೆ ಇದೆ.
ಪ್ರಸಕ್ತ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿರುವ ಕೆ.ಎಸ್ ಅಳಗಿರಿ ಅವರ ಅಧಿಕಾರ ಅವಧಿ ಈಗಾಗಲೇ ಪೂರ್ಣಗೊಂಡಿದ್ದು, ಪಕ್ಷದ ಮೇಲಿನ ಅವರ ನಿಷ್ಠೆಯನ್ನು ಗುರುತಿಸಿ ಲೋಕಸಭೆ ಚುನಾವಣೆವರೆಗೂ ಅವರನ್ನೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ಹೈಕಮಾಂಡ್ ನಿರ್ಧರಿಸಿದೆ. ಈ ಮಧ್ಯೆ ತಮಿಳುನಾಡು ಕಾಂಗ್ರೆಸ್ ಸಮಿತಿಯನ್ನು ಮೂರು ವಿಭಾಗಗಳಾಗಿ ವಿಂಗಡಿಸಿದ್ದು, ಮೊದಲನೇ ವಿಭಾಗವನ್ನು ಅಳಗಿರಿ, 2 ನೇ ವಿಭಾಗವನ್ನು ಸಿಎಲ್ಪಿ ನಾಯಕ ಸೆಲ್ವಪೆರು ತುಂಗೈ ಮುನ್ನಡೆಸುತ್ತಿದ್ದಾರೆ. ಮೂರನೇ ವಿಭಾಗದ ಉಸ್ತುವಾರಿಯನ್ನು ಸೆಂಥಿಲ್ ಅವರಿಗೆ ನೀಡುವ ಪ್ರಸ್ತಾಪ ವರಿಷ್ಠರ ಮುಂದಿದೆ.