News Karnataka Kannada
Wednesday, May 01 2024
ತಮಿಳುನಾಡು

ಓಂ ಶಕ್ತಿ ದೇವಸ್ಥಾನದ ಸಂಸ್ಥಾಪಕ ಬಂಗಾರು ಅಡಿಗಳಾರ್ ವಿಧಿವಶ

Om Shakti Temple founder Bangaru Adigalar passes away
Photo Credit : Facebook

ಚೆನ್ನೈ: ದಕ್ಷಿಣ ಭಾರತದ ಪ್ರಖ್ಯಾತ ಆಧ್ಯಾತ್ಮಿಕ ಗುರು. ತಮಿಳುನಾಡಿನ ಓಂ ಶಕ್ತಿ ದೇವಸ್ಥಾನದ ಸಂಸ್ಥಾಪಕ. ಆದಿಪರಾಶಕ್ತಿ ಚಾರಿಟೇಬಲ್ ವೈದ್ಯಕೀಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ. ಅಮ್ಮ ಎಂದೇ ಕರೆಯಲಾಗುವ ಬಂಗಾರು ಅಡಿಗಳಾರ್ ನಿಧನರಾಗಿದ್ದಾರೆ.

ಬಂಗಾರು ಅಡಿಗಳಾರ್ ಅವರಿಗೆ 82 ವರ್ಷ ವಯಸ್ಸಾಗಿತ್ತು. ಬಂಗಾರು ಅಡಿಗಳಾರ್ ಅವರ ನಿಧನದ ಕುರಿತ ಮಾಹಿತಿಯನ್ನು ಸಂಸದ ಬಿ.ವೈ.ರಾಘವೇಂದ್ರ ಅವರು ತಮ್ಮ ಫೇಸ್​​ಬುಕ್​ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

“ಓಂ ಶಕ್ತಿ ದೇವಸ್ಥಾನದ ಸಂಸ್ಥಾಪಕರು ಇಹಲೋಕ ಯಾತ್ರೆ ಮುಗಿಸಿದ್ದಾರೆ. ಮಹಿಳೆಯರಿಗೆ ಶಕ್ತಿ ದೇವತೆಯರ ದೇವಾಲಯಗಳ ಗರ್ಭಗುಡಿಯೊಳಗೆ ಪ್ರವೇಶ ದೊರಕಿಸಿಕೊಡುವ ಮೂಲಕ ಕ್ರಾಂತಿಯೊಂದಕ್ಕೆ ನಾಂದಿ ಹಾಡಿದ್ದ ಮಾತೃಹೃದಯಿ ಸ್ವಾಮೀಜಿಯವರು ಲಕ್ಷಾಂತರ ಭಕ್ತರ ಪಾಲಿಗೆ ‘ಅಮ್ಮ’ನೇ ಆಗಿದ್ದರು. ಅವರ ನಿರ್ಗಮನದಿಂದ ಜಗತ್ತು ಒಂದು ಅಧ್ಯಾತ್ಮಿಕ ಚೇತನವನ್ನೇ ಕಳೆದುಕೊಂಡಂತಾಗಿದೆ. ಬಂಗಾರು ಅವರ ಆತ್ಮಕ್ಕೆ ಓಂ ಶಕ್ತಿ ತಾಯಿ ಶಾಂತಿ ನೀಡಲೆಂದು ಮತ್ತು ಅವರ ಕುಟುಂಬಸ್ಥರಿಗೆ ಹಾಗೂ ಕೋಟಿ ಕೋಟಿ ಭಕ್ತಾದಿಗಳಿಗೆ ನೋವನ್ನು ಭರಿಸುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ” ಎಂಬುದಾಗಿ ಅವರು ಹೇಳಿದ್ದಾರೆ.

ಇನ್ನು ಬಂಗಾರು ಅಡಿಗಳಾರ್ ನಿಧನಕ್ಕೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸಂತಾಪ‌ ಸೂಚಿಸಿದ್ದಾರೆ. “ಆಧ್ಯಾತ್ಮಿಕ ಗುರು, ತಮಿಳುನಾಡಿನ ಮೇಲ್ಮರವತ್ತೂರಿನ ಓಂ ಶಕ್ತಿ, ಆದಿಪರಾಶಕ್ತಿ ದೇವಸ್ಥಾನದ ಸಂಸ್ಥಾಪಕ ಶ್ರೀ ಬಂಗಾರು ಅಡಿಗಳಾರ್ ಅವರು ಇಹಲೋಕ ತ್ಯಜಿಸಿದ ವಿಷಯ ತಿಳಿದು ಅತ್ಯಂತ ದುಃಖವಾಗಿದೆ. ಅವರ ನಿರ್ಗಮನದಿಂದ ಜಗತ್ತು ಹಿರಿಯ ಅಧ್ಯಾತ್ಮಿಕ ಮಾರ್ಗದರ್ಶಿ ಚೇತನವನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಬೇಡುತ್ತಾ, ಅವರ ಅಸಂಖ್ಯಾತ ಭಕ್ತಾದಿಗಳಿಗೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು” ಸಾಮಾಜಿಕ ಜಾಲತಾಣದನಲ್ಲಿ ಸಂತಾಪ ಸೂಚಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು