ರಾಮೇಶ್ವರಂ: ಶ್ರಿಲಂಕಾದ ತಲೈಮನ್ನಾರ್ನಿಂದ ತಮಿಳುನಾಡಿನ ರಾಮೇಶ್ವರಂನ ಧನುಷ್ಕೋಡಿಗೆ ಈಜುವ ವೇಳೆ ಬೆಂಗಳೂರಿನ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಮೃತರನ್ನು ಗೋಪಾಲ್ ರಾವ್ (78) ಎಂದು ಗುರುತಿಸಲಾಗಿದ್ದು, ಇವರು ಸೆಪ್ಟಜೆನೆರಿಯನ್ ಈಜುಪಟು ಎಂದು ತಿಳಿದು ಬಂದಿದೆ.
ರಿಲೇ ಈಜು ಸ್ಪರ್ಧೆಯಲ್ಲಿ ಗೋಪಾಲ್ ರಾವ್ ಅವರು ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ. ರಿಲೇ ಈಜು ಸ್ಪರ್ಧೆಯ ಭಾಗವಾಗಿ ಸ್ಪರ್ಧಾಳುಗಳು ಶ್ರೀಲಂಕಾದಿಂದ ಪಾಕ್ ಜಲಸಂಧಿಯ ಮೂಲಕ ಭಾರತದತ್ತ ಬರಬೇಕಿತ್ತು. ಏಪ್ರಿಲ್ 22ರಂದು ರಾಮೇಶ್ವರಂನಿಂದ ತಮಿಳುನಾಡಿಗೆ ದೋಣಿಯ ಮೂಲಕ ಹೊರಟು ಈಜುಗಾರರು ಏಪ್ರಿಲ್ 23ರಂದು ತಲೈಮನ್ನಾರ್ನಿಂದ ಧನುಷ್ಕೋಡಿಯತ್ತ ಈಜಲು ಶುರು ಮಾಡಿದರು.
ತಂಡದಲ್ಲಿ ಮೂರನೇ ಈಜುಗಾರನಾಗಿ ಪಾಲ್ಗೊಂಡಿದ್ದ ಗೊಪಾಲ್ ರಾವ್ ಮುಂಜಾನೆ 3 ಗಂಟೆ ಸುಮಾರಿಗೆ ಎದೆನೋವಿನ ಬಗ್ಗೆ ದೂರು ನೀಡಿದರು. ಕೂಡಲೇ ಅವರಿಗೆ ಚಿಕಿತ್ಸೆ ನೀಡಲಾಯಿತಾದರು ಫಲಕಾರಿಯಾಗದೆ ನಿಧನರಾದರು ಎಂದು ವೈದ್ಯರು ತಿಳಿಸಿದ್ದಾರೆ. ಗೊಪಾಲ್ ರಾವ್ ಅವರ ನಿಧನದ ಸುದ್ದಿ ಹೊರಬೀಳುತ್ತಿದ್ದಂತೆ ಕೂಡಲೇ ಸ್ಪರ್ಧೆಯನ್ನು ರದ್ದು ಪಡಿಸಲಾಯಿತು ಎಂದು ಆಯೋಜಕರು ತಿಳಿಸಿದ್ದಾರೆ..