News Karnataka Kannada
Sunday, May 05 2024
ತಮಿಳುನಾಡು

ಶ್ರೀಲಂಕಾದಲ್ಲಿ 6 ಭಾರತೀಯ ಮೀನುಗಾರರ ಬಂಧನ; ತಿಂಗಳಲ್ಲಿ ನಾಲ್ಕನೇ ಪ್ರಕರಣ

ಶ್ರೀಲಂಕಾದ ಜಲಗಡಿಯನ್ನು ಪ್ರವೇಶಿಸಿದ ಆರೋಪದಲ್ಲಿ ಅಲ್ಲಿನ ನೌಕಾಪಡೆ ಆರು ಭಾರತೀಯ ಮೀನುಗಾರರನ್ನು ಬಂಧಿಸಿದೆ. ಈ ಬಗ್ಗೆ ಮಂಗಳವಾರ ಶ್ರೀಲಂಕಾದ ನೌಕಾಪಡೆ ಹೊರಡಿಸಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಡೆಲ್ಫ್‌ ದ್ವೀಪದಲ್ಲಿ ಎರಡು ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
Photo Credit : News Kannada

ಕೊಲಂಬೋ: ಶ್ರೀಲಂಕಾದ ಜಲಗಡಿಯನ್ನು ಪ್ರವೇಶಿಸಿದ ಆರೋಪದಲ್ಲಿ ಅಲ್ಲಿನ ನೌಕಾಪಡೆ ಆರು ಭಾರತೀಯ ಮೀನುಗಾರರನ್ನು ಬಂಧಿಸಿದೆ. ಈ ಬಗ್ಗೆ ಮಂಗಳವಾರ ಶ್ರೀಲಂಕಾದ ನೌಕಾಪಡೆ ಹೊರಡಿಸಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಡೆಲ್ಫ್‌ ದ್ವೀಪದಲ್ಲಿ ಎರಡು ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಬಂಧಿತರನ್ನು ಕಂಕಾಸುಂತುರೈ ಬಂದರಿಗೆ ಕರೆದೊಯ್ಯಲಾಗಿದ್ದು, ಮುಂದಿನ ಕ್ರಮಕ್ಕೆ ಮೈಲಾಡಿ ಮೀನುಗಾರಿಕಾ ಇನ್ಸ್ಪೆಕ್ಟರ್ ಗೆ ಹಸ್ತಾಂತರಿಸಲಾಗಿದೆ.

ಕಳೆದವಾರವೂ ಇಂತಹ ಪ್ರಕರಣ ನಡೆದಿದ್ದು, ೧೮ ಭಾರತೀಯ ಮೀನುಗಾರರನ್ನು ಬಂಧಿಸಿ ಎರಡು ದೋಣಿಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ತಮಿಳುನಾಡು ಹಾಗು ಶ್ರೀಲಂಕಾವನ್ನು ಬೇರ್ಪಡಿಸುವ ಪಾಕ್ ಜಲಸಂಧಿ ಮೀನುಗಳು ಹೇರಳವಾಗಿ ದೊರೆಯುವ ಸ್ಥಳವಾಗಿದ್ದು, ಅಲ್ಲಿ ಹಲವಾರು ಬಾರಿ ಭಾರತೀಯ ಮೀನುಗಾರರ ಮೇಲೆ ಗುಂಡಿನ ದಾಳಿ ನಡೆಸಿ ದೋಣಿಗಳನ್ನು ವಶಕ್ಕೆ ತೆಗೆದುಕೊಂಡ ಘಟನೆ ನಡೆದಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು