ಕೊಯಮತ್ತೂರ: ಸಾರಿಗೆ ಇಲಾಖೆಗೆ ಸೇರಿದ ಬಸ್ ನಡು ರಸ್ತೆಯಲ್ಲೇ ಹೊತ್ತಿ ಉರಿದಿರುವ ಘಟನೆ ತಮಿಳುನಾಡಿನ ಕರುಮತ್ತಂಪಟ್ಟಿಯಲ್ಲಿ ನಡೆದಿದೆ.
ಸೇಲಂ-ಕೊಚ್ಚಿ ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ ಏಕಾಏಕಿ ಬಸ್ಗೆ ಬೆಂಕಿ ತಗುಲಿದೆ. ಅನಾಹುತದ ಸಂದರ್ಭದಲ್ಲಿ ಬಸ್ನಲ್ಲಿ ಸುಮಾರು 63 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಸಾರಿಗೆ ಬಸ್ ಮುಂಭಾಗದಲ್ಲಿ ಹೊಗೆ ಬರುವುದನ್ನು ಗಮನಿಸಿದ ಚಾಲಕ ಕೂಡಲೇ ಎಚ್ಚೆತ್ತುಕೊಂಡಿದ್ದಾನೆ. ತಕ್ಷಣವೇ ಬಸ್ ಚಾಲಕ ಹಾಗೂ ನಿರ್ವಾಹಕರು ತಕ್ಷಣವೇ ಎಲ್ಲಾ 63 ಪ್ರಯಾಣಿಕರನ್ನು ಬಸ್ನಿಂದ ಕೆಳಗೆ ಇಳಿಸಿದ್ದಾರೆ. ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ಸ್ಪಲ್ಪದರಲ್ಲೇ ತಪ್ಪಿ ಹೋಗಿದೆ. ಕರುಮತ್ತಂಪಟ್ಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
A #TNSTC bus plying on the Salem – Coimbatore route was gutted completely after it caught fire near Karumathampatti on Tuesday evening. The crew evacuated all the passengers. @THChennai pic.twitter.com/l2Gkt6b4TJ
— Wilson Thomas (@wilson__thomas) October 24, 2023