News Karnataka Kannada
Sunday, April 28 2024
ತಮಿಳುನಾಡು

ಸಿಎಎ ಕಾಯ್ದೆ ಜಾರಿಗೊಳಿಸದಂತೆ ತಮಿಳುನಾಡು ಸರ್ಕಾರಕ್ಕೆ ನಟ ವಿಜಯ್ ಮನವಿ

ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸರ್ಕಾರ ಜಾರಿಗೊಳಿಸಲು ಮುಂದಾಗಿದ್ದು ನಟ ದಳಪತಿ ವಿಜಯ್‌ ಇದನ್ನು ಜಾರಿಗೊಳಿಸದಿರಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ವಿರೋದ ಪಕ್ಷಗಳು ಕೂಡ ಈ ಕಾಯ್ದೆಯನ್ನು ಜಾರಿ ತರದಂತೆ ವಿರೋಧ ವ್ಯಕ್ತಪಡಿಸಿದೆ.
Photo Credit : News Kannada

ತಮಿಳುನಾಡು: ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸರ್ಕಾರ ಜಾರಿಗೊಳಿಸಲು ಮುಂದಾಗಿದ್ದು ನಟ ದಳಪತಿ ವಿಜಯ್‌ ಇದನ್ನು ಜಾರಿಗೊಳಿಸದಿರಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ವಿರೋದ ಪಕ್ಷಗಳು ಕೂಡ ಈ ಕಾಯ್ದೆಯನ್ನು ಜಾರಿ ತರದಂತೆ ವಿರೋಧ ವ್ಯಕ್ತಪಡಿಸಿದೆ.

ತಮಿಳುನಾಡು ಸರ್ಕಾರ ಸಿಎಎ ಜಾರಿ ಗೊಳಿಸಿದ ಬಳಿಕ ವಿಜಯ್‌ ಈ ಕಾಯ್ದೆಯನ್ನು ಹಿಂಪೆಡಯುವಂತೆ    ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ತಮಿಳುನಾಡು ರಾಜ್ಯ ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಹೇಳಿದ್ದಾರೆ. ಪೌರತ್ವ ತಿದ್ದುಪಡಿ 2019ರ ಯಾವುದೇ ಕಾನೂನನ್ನು ದೇಶ ಸಹಿಸಲು ತಯಾರಿಲ್ಲ , ನಮ್ಮ ದೇಶದಲ್ಲಿ ಎಲ್ಲರೂ ಸಹಬಾಳ್ವೆಯಿಂದ ಜೀವನ ಸಾಗಿಸುತ್ತಿರುವಾಗ ಇಂತಹ ಕಾಯ್ದೆಯ ಯಾವುದೇ ಅಗತ್ಯ ಇಲ್ಲ ಎಂದಿದ್ದಾರೆ ಹಾಗೂ ತಮಿಳುನಾಡು ಯಾವುದೆ ಕಾರಣಕ್ಕೂ ಇದನ್ನು ಜಾರಿ ತರದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.

ಚುನಾವಣೆ ಲಾಭ ಪಡೆಯಲು ಮೂದಿ ಸರ್ಕಾರ ಈ ಸಾಹಸ ಮಾಡುತ್ತಿದೆ ಎಂದು ಎಐಎಂಐಎಂ ಪಕ್ಷದ ಅಸಾದುದ್ದೀನ್‌ ಒವೈಸಿ ಹೇಳಿದ್ದಾರೆ.

ಸಿಎಎ ಎಂದರೆ ಭಾರತದ ನೆರೆಯ ದೇಶಗಳಾದ ಬಾಂಗ್ಲದೇಶ, ಪಾಕಿಸ್ತಾನ್‌ ಮತ್ತು ಅಫ್ಘಾನಿಸ್ತಾನ್‌ನಿಂದ 2014 ಡಿಸೆಂಬರ್‌ 31 ರಂದು ಬಂದು ನಮ್ಮ ದೇಶದಲ್ಲಿ ನೆಲಿಸಿದ ಅಲ್ಪಸಂಖ್ಯಾತರಿಗೆ ಸಮುದಾಯ ಜನರಿಗೆ ನಮ್ಮ ದೇಶದ ಪೌರತ್ವ ಪಡೆಯುವ ಅವಕಾಶ ನೀಡುವುದು. ಆದರೆ ಇದರ ವಿರುದ್ಧ ನಟ ವಿಜಯ ಮತ್ತು ವಿರೋಧ ಪಕ್ಷ ನಮ್ಮ ರಾಜ್ಯಕ್ಕೆ ಈ ಕಾಯ್ದೆ ಸ್ವೀಕಾರಾರ್ಹವಿಲ್ಲ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು