News Karnataka Kannada
Saturday, May 11 2024
ತಮಿಳುನಾಡು

10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು: ಶಾಲಾ ಪ್ರಾಂಶುಪಾಲ ಅರೆಸ್ಟ್

Child Death
Photo Credit :

 ಪಲಮನೇರ್: 10ನೇ ತರಗತಿಯ ಟಾಪರ್​ ಆತ್ಮಹತ್ಯೆಗೆ ಶರಣಾದ ಘಟನೆಯು ಚಿತ್ತೂರಿನ ಪಲಮನೇರ್​ ಎಂಬ ಪುಟ್ಟ ಪಟ್ಟಣದಲ್ಲಿ ನಡೆದಿದೆ.

ಸೋಡಾ ಮಾರಾಟಗಾರನ ಪುತ್ರಿ ಮಿಸ್ಬಾ ಫಾತಿಮಾ ಎಂಬಾಕೆ ಆತ್ಮಹತ್ಯೆಗೆ ಶರಣಾಗಿದ್ದು ಈಕೆ ಗಂಗಾವರಂನ ಬ್ರಹ್ಮರ್ಷಿ ಪ್ರೌಢಶಾಲೆಯಲ್ಲಿ ಓದುತ್ತಿದ್ದಳು ಎನ್ನಲಾಗಿದೆ.‌

ಆತ್ಮಹತ್ಯೆ ಮಾಡಿಕೊಂಡ ಬಾಲಕಿಯ ಡೆತ್​ನೋಟ್​​​ ಪ್ರಾಂಶುಪಾಲರ ವಿರುದ್ಧ ಅನುಮಾನಕ್ಕೆ ಕಾರಣವಾಗಿದೆ. ಮಿಸ್ಬಾ ಫಾತಿಮಾಳ ಸಹಪಾಠಿಯ ತಂದೆಯು ನನ್ನ ಟಿಸಿಯನ್ನು ನೀಡುವಂತೆ ಪ್ರಾಂಶುಪಾಲರಿಗೆ ಒತ್ತಡ ಹೇರಿದ್ದರು.

ಶಾಲೆಯ ಪ್ರಾಂಶುಪಾಲರ ಅನುಚಿತ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿನಿ ಈ ನಿರ್ಧಾರ ಕೈಗೊಂಡಿದ್ದಾಳೆ ಎಂದು ಫಾತಿಮಾ ಕುಟುಂಬಸ್ಥರು ಆರೋಪಿಸಿದ್ದಾರೆ.

ಪ್ರಾಂಶುಪಾಲ ರಮೇಶ್​​ ಈ ಶೈಕ್ಷಣಿಯ ವರ್ಷ ಪೂರ್ಣಗೊಳ್ಳುವ ಮುನ್ನವೇ ಮಿಸ್ಬಾಳಿಗೆ ವರ್ಗಾವಣೆ ಪ್ರಮಾಣ ಪತ್ರ ನೀಡಿದ್ದರು.

ರಮೇಶ್​​ನನ್ನ ಪಲಮನೇರ್​ ಪೊಲೀಸರು ಇಂದು ಬಂಧಿಸಿದ್ದಾರೆ. ಇವರ ವಿರುದ್ಧ 306, 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಶಾಲೆಯಿಂದಲೂ ರಮೇಶ್​​ರನ್ನು ಅಮಾನತುಗೊಳಿಸಲಾಗಿದೆ.

ನಾನು ಶಾಲೆಯಿಂದ ಹೊರ ಹೋದರೆ ತನ್ನ ಮಗಳು ಕ್ಲಾಸ್​ಗೆ ಮೊದಲ ಸ್ಥಾನ ಪಡೆಯುತ್ತಾಳೆ ಎಂಬುದು ಅವರ ಉದ್ಧೇಶವಾಗಿತ್ತು ಎಂದು ಬರೆಯಲಾಗಿದೆ.

ಆದರೆ ಮಿಸ್ಬಾ ಸಹಪಾಠಿಯ ತಂದೆಯು ರಾಜಕೀಯದಲ್ಲಿ ತೊಡಗಿಸಿಕೊಂಡಿರುವುದರಿಂದ ಅವರನ್ನು ಬಂಧಿಸಲು ಪೊಲೀಸರು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಮಿಸ್ಬಾ ಕುಟುಂಬಸ್ಥರು ಆರೋಪಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು