ಬೆಂಗಳೂರು : ನಾನು ಯಾವುದೇ ಜಾತಿ ಪ್ರಮಾಣ ಪತ್ರವನ್ನು ಪಡೆದಿಲ್ಲ. ನನ್ನ ಮಗಳು ಕೂಡ ಪಡೆದಿಲ್ಲ. ವಿನಾಕಾರಣ ನನ್ನ ಮಗಳ ಮೇಲೆ ಆರೋಪ ಮಾಡಿದ್ರೇ, ತಾನು ಸುಮ್ಮನೆ ಇರೋದಿಲ್ಲ ಎಂಬುದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ ರೇಣುಕಾಚಾರ್ಯ ಗುಡುಗಿದ್ದಾರೆ.
ಇಂದು ವಿಧಾನಸೌಧದ ಕೆಂಗಲ್ ಹನುಮಂತಯ್ಯ ದ್ವಾರದ ಬಳಿಯ್ಲಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾನು ಯಾವುದೇ ಜಾತಿ ಪ್ರಮಾಣ ಪತ್ರ ಪಡೆದಿಲ್ಲ.
ನನ್ನ ಮಗಳು ಹೈಸ್ಕೂಲ್ ಗೆ ಹೋಗುವಾಗ ಜಾತಿ ಪ್ರಮಾಣ ಪತ್ರ ಪಡೆದಿದ್ದಳು. 40 ಲಕ್ಷ ಹಣ ಪಡೆದಿದ್ದ ಎಂದು ನನ್ನ ಆರೋಪ ಮಾಡಿದ್ರು. ನನ್ನ ಬಗ್ಗೆ ಏನಾದರೂ ರಾಜಕಾರಣ ಮಾಡಲಿ, ಆದ್ರೇ ವಿನಾಕಾರಣ ನನ್ನ ಮಗಳ ಮೇಲೆ ಆರೋಪ ಮಾಡಿದ್ರೆ ಸುಮ್ಮನಿರಲ್ಲ. ಅದಕ್ಕೆ ಸರಿಯಾದ ಉತ್ತರ ನೀಡುತ್ತೇನೆ. ಕೋರ್ಟ್ ನಲ್ಲಿ ಮಾನನಷ್ಟ ಮೊಕದ್ದಮೆ ಧಾವೆ ಹೂಡುವುದಾಗಿ ಖಡಕ್ ಎಚ್ಚರಿಕೆ ನೀಡಿದರು.
ನನ್ನ ಮಗಳ ಬಗ್ಗೆ ಅರೋಪ ಮಾಡುವವರು, ಸೂಕ್ತ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಬುಟ್ಟಿಯಲ್ಲಿ ಹಾವು ಇದೆ ಅಂತ ಬುರುಡೆ ಬಿಡಬೇಡಿ. ಸರ್ಟಿಫಿಕೇಟ್ ಪಡೆದಿದ್ರೆ ದಾಖಲೆ ಬಿಡುಗಡೆ ಮಾಡಿ. ಈ ರೀತಿಯ ಸುಳ್ಳು ಆರೋಪ ಮಾಡುವುದು ಸರಿಯಲ್ಲ. ಸಿಎಂ , ಕಾನೂನು ಹಾಗೂ ಗೃಹ ಸಚಿವರು ಪರಿಶೀಲನೆ ಮಾಡಲಿ. ನಾನು ಯಾವುದೇ ಸರ್ಕಾರದ ಸೌಲಭ್ಯ ಪಡೆದಿಲ್ಲ. ಪಡೆದಿದ್ದರೆ ದಾಖಲೆ ಬಿಡುಗಡೆ ಮಾಡಿ ಎಂಬುದಾಗಿ ಸವಾಲ್ ಹಾಕಿದರು.