ಮಧುರೈ(ತಮಿಳುನಾಡು) : ತಮಿಳುನಾಡಿನಲ್ಲಿ ವ್ಯಕ್ತಿಯೋರ್ವ ತನ್ನ ಅಳಿಯನ ತಂದೆಯನ್ನೇ ಕೊಂದಿರುವ ದಾರುಣ ಘಟನೆ ಶನಿವಾರ ನಡೆದಿದೆ.ಪೊಲೀಸರ ಪ್ರಕಾರ, ತಿದಿರ್ ನಗರದ ನಿವಾಸಿ ರಾಮಚಂದ್ರನ್ ಅವರ ಮಗ ಶಿವಪ್ರಸಾದ್ ಅದೇ ಪ್ರದೇಶದಲ್ಲಿ ವಾಸಿಸುವ ಹುಡುಗಿಯನ್ನು ಪ್ರೀತಿಸುತ್ತಿದ್ದನು.
ಇಬ್ಬರೂ ಬೇರೆ ಬೇರೆ ಸಮುದಾಯದವರಾಗಿದ್ದರಿಂದ ಹುಡುಗಿಯ ಮನೆಯವರು ಮತ್ತು ಸಂಬಂಧಿಕರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದಾಗ್ಯೂ, ಈ ಜೋಡಿಗಳು ಮಾರ್ಚ್ 4 ರಂದು ಅವರು ಯಾರಿಗೂ ಹೇಳದೆ ವಿವಾಹವಾದರು. ಮದುವೆಯಾದ ವಿಷಯ ತಿಳಿದ ಹುಡುಗಿಯ ತಂದೆ ಸದಾಯಾಂಡಿ ಕೋಪದ ಭರದಲ್ಲಿ ಮಧುರೈ ಪೆರಿಯಾರ್ ಬಸ್ ನಿಲ್ದಾಣದಲ್ಲಿ ವರನ ತಂದೆಯನ್ನು ಕೊಲೆ ಮಾಡಿದ್ದಾನೆ.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸದಯ್ಯಂಡಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.