ಪಶ್ಚಿಮಬಂಗಾಳ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾರಿಗೆ ಕಲ್ಲು ಎಸೆದ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ನಡೆದಿದೆ. ಬಿಹಾರದಿಂದ ಮಾಲ್ಡಾಗೆ ತೆರಳುವ ವೇಳೆ ರಾಹುಲ್ ಗಾಂಧಿ ಕಾರಿಗೆ ಜನರು ಕಲ್ಲು ಎಸೆದಿದ್ದಾರೆ.
ಕಲ್ಲು ಎಸೆದ ಪರಿಣಾಮ ಕಾರಿನ ಗಾಜು ಒಡೆದಿದೆ. ಇದಾದ ಬಳಿಕ ರಾಹುಲ್ ಗಾಂಧಿ ಕಾರಿನಿಂದ ಇಳಿದಿದ್ದಾರೆ. ಅದೇ ಕಾರಿನಲ್ಲಿ ಅಧೀರ್ ರಂಜನ್ ಚೌಧರಿ ಕೂಡ ಪ್ರಯಾಣ ಬೆಳೆಸುತ್ತಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಅಧೀರ್ ರಂಜನ್ ಚೌಧರಿ ‘ನಾನು ಕಾರಿನೊಳಗೆ ಇದ್ದೆ. ಯಾರೋ ಹಿಂದಿನಿಂದ ಇಟ್ಟಿಗೆ ಎಸೆದಿದ್ದಾರೆ. ರಾಹುಲ್ ಗಾಂಧಿಯವರ ‘ಭಾರತ್ ಜೋಡೋ ಯಾತ್ರೆ’ ಕೈಗೊಂಡು ಬಂಗಾಳಕ್ಕೆ ಪ್ರವೇಶಿಸಿದಾಗಿನಿಂದ ಅಡೆತಡೆಗಳನ್ನು ಎದುರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.