News Karnataka Kannada
Friday, May 10 2024
ದೇಶ

ಮಿಮಿಕ್ರಿ ಮಾಡಿದ ಸಂಸದನ ಹುಟ್ಟುಹಬ್ಬಕ್ಕೆ ವಿಶ್‌ ಮಾಡಿ ಭೋಜನಕ್ಕೆ ಆಹ್ವಾನಿಸಿದ ಸ್ಪೀಕರ್

Dnk
Photo Credit : News Kannada

ನವದೆಹಲಿ: ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ಅವರು ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರ ಜನ್ಮದಿನದಂದು ಅವರನ್ನ ಅಭಿನಂದಿಸಿದರು ಮತ್ತು ಕುಟುಂಬದೊಂದಿಗೆ ಭೋಜನಕ್ಕೆ ಆಹ್ವಾನಿಸಿದರು. ಇನ್ನು ಇದಕ್ಕಾಗಿ ಟಿಎಂಸಿ ನಾಯಕ ಧನ್ಯವಾದ ಅರ್ಪಿಸಿದ್ದಾರೆ.

ರಾಜ್ಯಸಭಾ ಅಧ್ಯಕ್ಷರು ತಮ್ಮನ್ನು ಮತ್ತು ಅವರ ಪತ್ನಿಯನ್ನ ದೆಹಲಿಯ ತಮ್ಮ ನಿವಾಸದಲ್ಲಿ ಭೋಜನಕ್ಕೆ ಆಹ್ವಾನಿಸಿದ್ದಾರೆ ಎಂದು ಅವರು ಹೇಳಿದರು. “ನನ್ನ ಜನ್ಮದಿನದಂದು ಆತ್ಮೀಯ ಶುಭಾಶಯಗಳಿಗಾಗಿ ಗೌರವಾನ್ವಿತ ರಾಜ್ಯಸಭಾ ಅಧ್ಯಕ್ಷರಿಗೆ ಧನ್ಯವಾದಗಳು. ಅವರು ವೈಯಕ್ತಿಕವಾಗಿ ನನ್ನ ಹೆಂಡತಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಮತ್ತು ನನ್ನ ಇಡೀ ಕುಟುಂಬಕ್ಕೆ ಆಶೀರ್ವಾದ ನೀಡಿದ್ದಾಕ್ಕಾಗಿ  ನಾನು ಭಾವಪರವಶನಾಗಿದ್ದೇನೆ” ಎಂದರು.

ಕೆಲವು ದಿನಗಳ ಹಿಂದೆ, ಟಿಎಂಸಿ ನಾಯಕ ರಾಜ್ಯಸಭಾ ಅಧ್ಯಕ್ಷರನ್ನ ಅನುಕರಿಸುವ ಮೂಲಕ ವಿವಾದವನ್ನ ಹುಟ್ಟುಹಾಕಿದ್ದರು. ಸಂಸತ್ತಿನ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಸಂಸತ್ತಿನ ಮಕರ ಗೇಟ್ನಲ್ಲಿ ಅಮಾನತುಗೊಂಡ ಸಂಸದರ ಪ್ರತಿಭಟನೆಯ ಸಮಯದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅದನ್ನು ತಮ್ಮ ಫೋನ್ನಲ್ಲಿ ರೆಕಾರ್ಡ್ ಮಾಡಿದ್ದರು. ಆ ಸಮಯದಲ್ಲಿ, ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಧನ್ಕರ್ ಅವರ ಮಿಮಿಕ್ರಿಯನ್ನ ಕಲೆಯ ಒಂದು ರೂಪ ಎಂದು ಬಣ್ಣಿಸಿದ್ದರು. ಅವರು ಅದನ್ನ ಸಾವಿರಾರು ಬಾರಿ ಮುಂದುವರಿಸುತ್ತೇನೆ ಮತ್ತು ಹಾಗೆ ಮಾಡಲು ನನಗೆ ಮೂಲಭೂತ ಹಕ್ಕು ಇದೆ ಎಂದು ಹೇಳಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು