ಸಿಕ್ಕಿಂ: ಭೀಕರ ಮೇಘಸ್ಪೋಟಕ್ಕೆ ನಲುಗಿ ಹೋಗಿದೆ.ಪ್ರವಾಹದ ರೌದ್ರರೂಪಕ್ಕೆ ಸಿಕ್ಕಿಂನಲ್ಲಿ ಸಂಕಷ್ಟಗಳ ಸರಮಾಲೆಯೇ ಸೃಷ್ಟಿಯಾಗಿದೆ. ಇದರ ಮಧ್ಯೆ ಕರ್ನಾಟಕದಿಂದ ಪ್ರವಾಸಕ್ಕೆ ಹೋಗಿದ್ದ 17 ಜನರು ಕಷ್ಟಕ್ಕೆ ಸಿಲುಕಿದ್ದಾರೆ.
ಪ್ರವಾಸಕ್ಕೆ ತೆರಳಿದ್ದ 17 ಬೆಂಗಳೂರಿಗ ಪ್ರವಾಸಿಗರು ಪರದಾಟ ನಡೆಸುತ್ತಿದ್ದಾರೆ. ನಾಗರಬಾವಿಯ ಟ್ರಾವೆಲ್ಸ್ನಿಂದ ಕಾರಿನ ಮೂಲಕ ಬೆಂಗಳೂರಿಗರು ಸಿಕ್ಕಿಂಗೆ ಹೋಗಿದ್ದರು. ಇದೀಗ ಮೇಘ ಸ್ಫೋಟ ಹಿನ್ನೆಲೆಯಲ್ಲಿ ಸಿಕ್ಕಿಂನ ಗ್ಯಾನ್ಕಾಕ್ ಎಂಬಲ್ಲಿ ಸಿಲುಕಿದ್ದಾರೆ. ಮೇಘ ಸ್ಫೋಟದಿಂದ ತೀಸ್ತಾ ನದಿಯಲ್ಲಿ ಭಾರೀ ಪ್ರವಾಹ ಉಂಟಾಗಿದೆ.
ಪರಿಣಾಮ ಈ 17 ಪ್ರವಾಸಿಗರ ಕಾರಿಗೆ ಡಿಸೇಲ್ ಹಾಕಲು ಸಾಧ್ಯವಾಗುತ್ತಿಲ್ಲ. ಎಲ್ಲಿಯೂ ಡಿಸೇಲ್ ಸಿಗದ ಹಿನ್ನೆಲೆಯಲ್ಲಿ ಆತಂಕಕ್ಕೆ ಸಿಲುಕಿದ್ದಾರೆ. ಗ್ಯಾನ್ಕಾಕ್ನಿಂದ ಅವರು ಸಿಲಿಗುರಿಗೆ ತೆರಳಬೇಕಿತ್ತು. ಸಿಲಿಗುರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 10ರ ಸ್ಟೀಲ್ ಬ್ರಿಜ್ಡ್ ಕೊಚ್ಚಿ ಹೋಗಿದೆ. ಇದು ಪ್ರವಾಸಿಗರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.
ಇನ್ನು ಮೇಘಸ್ಫೋಟದಿಂದಾಗಿ ತೀಸ್ತಾ ನದಿಯಲ್ಲಿ ಪ್ರವಾಹ ಉಂಟಾಗಿ ಇದುವರೆಗೆ 14 ಜನರು ಸಾವನ್ನಪ್ಪಿದ್ದಾರೆ. 102 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸಿಕ್ಕಿಂ ಸರ್ಕಾರ ತಿಳಿಸಿದೆ. 22 ಸೇನಾ ಸಿಬ್ಬಂದಿ ಸೇರಿದಂತೆ 82 ಜನರು ಕಣ್ಮರೆಯಾಗಿದ್ದಾರೆ. ಇನ್ನು 14 ಸೇತುವೆಗಳು ಗಳು ಕುಸಿದಿವೆ ಮತ್ತು 3,000ಕ್ಕೂ ಹೆಚ್ಚು ಪ್ರವಾಸಿಗರು ರಾಜ್ಯದ ವಿವಿಧ ಭಾಗಗಳಲ್ಲಿ ಸಿಲುಕಿರುವ ಆತಂಕವಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.