ನವದೆಹಲಿ: ರಂಗಪಂಚಮಿ ಹಬ್ಬದ ಸಂದರ್ಭದಲ್ಲಿ ಇಂದೋರ್ ಸೇರಿದಂತೆ ಮಧ್ಯಪ್ರದೇಶದ ಜನರು ಬಣ್ಣ ಎರಚಿ ಸಂಭ್ರಮಿಸಿದರು. ಈ ನಡುವೆ ಆಂಬ್ಯುಲೆನ್ಸ್ವೊಂದು ಜನಸಂದಣಿಯಲ್ಲಿ ಸಿಲುಕಿಕೊಂಡಿತ್ತು. ಇದು ತಿಳಿದ ಬೆನ್ನಲ್ಲೇ ಕೆಲವೇ ನಿಮಿಷದಲ್ಲಿ ಜನರು ಆಂಬ್ಯುಲೆನ್ಸ್ಗೆ ದಾರಿ ಮಾಡಿಕೊಟ್ಟಿದ್ದು ಅಚ್ಚರಿಗೆ ಕಾರಣವಾಯಿತು.
ಆ ಮೂಲಕ ರೋಗಿಯು ಸಮಯಕ್ಕೆ ಸರಿಯಾಗಿ ಆಸ್ಪತ್ರೆ ತಲುಪಲು ಸಹಾಯ ಮಾಡಿದರು. ರಂಗಪಂಚಮಿ ಉತ್ಸವದ ನಡುವೆ ಸಿಲುಕೊಂಡಿದ್ದ ಆಂಬ್ಯುಲೆನ್ಸ್ ದಾರಿ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿತ್ತು. ಈ ವೇಳೆ ವಾಹನದ ಸೈರನ್ ಕೇಳಿದ ಜನರು, ಕ್ಷಣಮಾತ್ರದಲ್ಲಿ ದಾರಿ ಮಾಡಿಕೊಟ್ಟರು. ಭಾರೀ ಪ್ರಮಾಣದ ಜನಸಂದಣಿಯ ನಡುವೆಯೂ ಕೆಲವೇ ನಿಮಿಷದಲ್ಲಿ ಆಂಬ್ಯುಲೆನ್ಸ್ ಈ ಹಾದಿಯಲ್ಲಿ ಪಾಸ್ ಆಗಿದೆ.
ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಹಾಜರಿದ್ದ ಭದ್ರತಾ ಸಿಬ್ಬಂದಿ ಕೂಡ ಆಂಬ್ಯುಲೆನ್ಸ್ ಅನ್ನು ಜನಸಂದಣಿಯ ಮೂಲಕ ಚಲಿಸಲು ಸಹಾಯ ಮಾಡಿದರು ಮತ್ತು ಅದು ಕೆಲವೇ ನಿಮಿಷಗಳಲ್ಲಿ ಆಸ್ಪತ್ರೆ ತಲುಪಿತು ಎಂದಿದ್ದಾರೆ.
#WATCH | Indore, Madhya Pradesh: Crowd makes way for an ambulance during Rang Panchami celebrations. pic.twitter.com/piIGGLhHoI
— ANI (@ANI) March 30, 2024