News Karnataka Kannada
Saturday, April 27 2024
ರಾಜಸ್ಥಾನ

ವಿಐಪಿ ಸಂಸ್ಕೃತಿಗೆ ಅಂತ್ಯ ಹಾಡಿದ ರಾಜಸ್ಥಾನ ಸಿಎಂ

ಮುಖ್ಯಮಂತ್ರಿಗಳ ವಾಹನಗಳು ಬಂತೆಂದರೆ ತುರ್ತು ಅಗತ್ಯವಿದ್ದವರು ಕೂಡ ಸಿಗ್ನಲ್​ನಲ್ಲಿ ನಿಲ್ಲಬೇಕಿತ್ತು, ಹೀಗಾಗಿ ಜನರು ತುಂಬಾ ತೊಂದರೆ ಅನುಭವಿಸುತ್ತಿದ್ದರು. ಇನ್ನುಮುಂದೆ ಈ ಕಿರಿಕಿರಿ ಇರುವುದಿಲ್ಲ.  ಮುಖ್ಯಮಂತ್ರಿ ಭಜನ್​ ಲಾಲ್ ಶರ್ಮಾ ಒಂದು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.  ಇವರು ವಿಐಪಿ ಸಂಸ್ಕೃತಿಗೆ ಅಂತ್ಯ ಹಾಡಿದ್ದಾರೆ.
Photo Credit : News Kannada

ರಾಜಸ್ಥಾನ: ಮುಖ್ಯಮಂತ್ರಿಗಳ ವಾಹನಗಳು ಬಂತೆಂದರೆ ತುರ್ತು ಅಗತ್ಯವಿದ್ದವರು ಕೂಡ ಸಿಗ್ನಲ್​ನಲ್ಲಿ ನಿಲ್ಲಬೇಕಿತ್ತು, ಹೀಗಾಗಿ ಜನರು ತುಂಬಾ ತೊಂದರೆ ಅನುಭವಿಸುತ್ತಿದ್ದರು. ಇನ್ನುಮುಂದೆ ಈ ಕಿರಿಕಿರಿ ಇರುವುದಿಲ್ಲ.  ಮುಖ್ಯಮಂತ್ರಿ ಭಜನ್​ ಲಾಲ್ ಶರ್ಮಾ ಒಂದು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.  ಇವರು ವಿಐಪಿ ಸಂಸ್ಕೃತಿಗೆ ಅಂತ್ಯ ಹಾಡಿದ್ದಾರೆ.

ಭಜನ್​ಲಾಲ್ ಇನ್ನುಮುಂದೆ ರಸ್ತೆಯಲ್ಲಿ ಸಾಮಾನ್ಯ ಜನರಂತೆ ಸಂಚರಿಸಲಿದ್ದಾರೆ. ಸಿಗ್ನಲ್​ಗಳಲ್ಲಿ ಅವರ ವಾಹನ ಹಾಗೂ ಬೆಂಗಾವಲು ವಾಹನಗಳು ಎಲ್ಲಾ ವಾಹನಗಳು ನಿಲ್ಲುವಂತೆಯೇ ನಿಲ್ಲಲಿದೆ. ಅವರಿಗಾಗಿ ಪ್ರತ್ಯೇಕ ಸಾಲು ಮಾಡಿ ಓಡಾಡುವ ಸಂಸ್ಕೃತಿಯಿಂದ ಹೊರಬಂದಿದ್ದಾರೆ. ಈ ನಿರ್ಧಾರವು ರಾಜಸ್ಥಾನ ಜನತೆಗೆ ಖುಷಿ ತಂದಿದೆ.

ಭಜನ್​ಲಾಲ್ ಶರ್ಮಾ ಅವರು ಸಹೃದಯತೆ ಹಾಗೂ ಸೂಕ್ಷ್ಮತೆಯಿಂದ ಈ ವಿಚಾರವನ್ನು ಗಮನಿಸಿ ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ.

ಮುಖ್ಯಮಂತ್ರಿಗಳಿಗೆ ಒದಗಿಸಲಾದ ಭದ್ರತೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ವಿಐಪಿ ಸಂಚಾರ ವ್ಯವಸ್ಥೆಗೆ ಸಂಬಂಧಿಸಿದಂತೆ ಸಾಮಾನ್ಯ ಜನರು ಮತ್ತು ರೋಗಿಗಳು ಎದುರಿಸುತ್ತಿರುವ ಟ್ರಾಫಿಕ್ ಸಮಸ್ಯೆಗಳನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಡಿಜಿಪಿ ಸಾಹೂ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು