ಜೈಪುರ: ರಾಜಸ್ಥಾನ ಸರ್ಕಾರದ ಎಲ್ಲ ಮಂತ್ರಿಗಳು ಮುಖ್ಯಮಂತ್ರಿಗೆ ಶನಿವಾರ ರಾಜೀನಾಮೆ ಸಲ್ಲಿಸಿದ್ದಾರೆ.ಸಚಿವ ಸಂಪುಟ ಪುನಾರಚನೆಯ ಹಿನ್ನೆಲೆಯಲ್ಲಿ ಎಲ್ಲರೂ ರಾಜೀನಾಮೆ ನೀಡಿದ್ದಾರೆ. ಪಿಸಿಸಿ ಸಭೆ ನಾಳೆಗೆ ನಿಗದಿಯಾಗಿದ್ದು, ಅಲ್ಲಿ ಹೊಸ ಸಚಿವರ ಆಯ್ಕೆ ನಡೆಯಲಿದೆ ಎನ್ನಲಾಗಿದೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ನೇತೃತ್ವದ ಸಂಪುಟ ಸಭೆಯು ಶನಿವಾರ ಜೈಪುರದಲ್ಲಿ, ಅವರ ನಿವಾಸದಲ್ಲೇ ನಡೆಯಿತು. ಸಭೆಯ ನಂತರ ಸಚಿವರು ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಕಚಾರಿಯಾವಾಸ್ ತಿಳಿಸಿದ್ದಾರೆ.