News Karnataka Kannada
Tuesday, April 30 2024
ಪಂಜಾಬ್

ಯುವ ರೈತನ ಸಾವು: 1 ಕೋಟಿ ರೂ ಪರಿಹಾರ ನೀಡಿದ ಪಂಜಾಬ್‌ ಸರ್ಕಾರ

ಪ್ರತಿಭಟನೆ ವೇಳೆ ಮೃತ ಪಟ್ಟ ಯುವರೈತ ಶುಭಕರ್‌ ಸಿಂಗ್‌ ಅವರ ಕುಟುಂಬಕ್ಕೆ ಪಂಜಾಬ್‌ ಸಿ ಎಂ ಭಗವಂತ್‌ ಮಾನ್‌ ಪರಿಹಾರ ಧನ 1 ಕೋಟಿ ರೂ ಮತ್ತು ಸರ್ಕಾರಿ ನೌಕರಿ ನೀಡುವುದಾಗಿ ಘೋಷಿಸಿದೆ.
Photo Credit : News Kannada

ಚಂಡೀಗಡ್‌: ಪ್ರತಿಭಟನೆ ವೇಳೆ ಮೃತ ಪಟ್ಟ ಯುವರೈತ ಶುಭಕರ್‌ ಸಿಂಗ್‌ ಅವರ ಕುಟುಂಬಕ್ಕೆ ಪಂಜಾಬ್‌ ಸಿ ಎಂ ಭಗವಂತ್‌ ಮಾನ್‌ ಪರಿಹಾರ ಧನ 1 ಕೋಟಿ ರೂ ಮತ್ತು ಸರ್ಕಾರಿ ನೌಕರಿ ನೀಡುವುದಾಗಿ ಘೋಷಿಸಿದೆ.

ಖಾನೌರಿ ಗಡಿಯಲ್ಲಿ ಫೆ 21 ರಂದು ನಡೆದ ಪ್ರತಿಭಟನೆ ವೇಳೆ ಯುವ ರೈತ ಶುಭಕರ್‌ ಸಿಂಗ್‌ ಮೃತಪಟ್ಟಿದ್ದಾನೆ. ಈ ಕುರಿತು ತನಿಖೆ ನಂತರ ಪೊಲೀಸರು ಎಫಐಆರ್‌ ದಾಖಲಿಸಿಕೊಳ್ಳಲಿದ್ದಾರೆ ಎಂದು ಸಿ ಎಂ ಮಾನ್‌ ತಿಳಿಸಿದರು.

ಜೊತೆಗೆ ಇವರ ಸಾವಿಗೆ ಕಾರಣವಾದವರ ವಿರುದ್ಧ ಎಫ್‌ ಐ ಆರ್‌ ದಾಖಲಿಸಿ ಅವರಿಗೆ ತಕ್ಕ ಶಿಕ್ಷೆಯನ್ನು ಖಚಿತಪಡಿಸುವುದಾಗಿ ತಿಳಿಸಿದರು. ಸದ್ಯ ಯಾವುದೆ ಎಫ್‌ ಐ ಆರ್‌ ಅಥವಾ ಮರಣೋತ್ತರ ಪರೀಕ್ಷೆಗೆ ಒಳಪಡಿಸದ ಕಾರಣ ಶುಭಕರ್‌ ಅವರ ದೇಹವನ್ನು ಪಟಿಯಾಲದ ರಾಜೇಂದ್ರ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಆದರೆ ರೈತ ಮುಖಂಡರು ಮತ್ತು ಶುಭಕರ್‌ ಸಿಂಗ್‌ ಕುಟುಂಬದವರು ಸರ್ಕಾರದ ಪ್ರಸ್ತಾಪವನ್ನು ತಿರಸ್ಕರಿಸಿ ಮೊದಲು ಯುವ ರೈತನ ಗುಂಡು ಹಾರಿಸಿ ಅವರ ಸಾವಿಗೆ ಕಾರಣವಾದವರ ಮೇಲೆ ಎಫ್‌ ಐ ಆರ್‌ ದಾಖಲಿಸಿ ಎಂದು ಒತ್ತಾಯಿಸಿದ್ದಾರೆ. ಹಾಗೂ ಮರೋಣತ್ತರ ಪರೀಕ್ಷೆಗೆ ಸಹಿ ಹಾಕದೆ ನಿರಾಕರಿಸಿದ್ದಾರೆ.

ಹೀಗೆ ನೊಂದ ಕುಟುಂಕ್ಕೆ ಬೇಟಿ ನೀಡಿ ಸಾಂತ್ವನ ಹೇಳಿದ ಜಗ್ಜಿತ್ ಸಿಂಗ್‌ ದಲ್ಲೆವಾಲ್‌, ಸರ್ವಾನ್‌ ಸಿಂಗ್‌ ಪಂದೇರ ಸೇರಿದಂತೆ ರೈತ ಮುಖಂಡರು ಸಾಂತ್ವನ ಹೇಳಿದದ್ದರು. ಹಾಗೂ ಎಫ್‌ ಐ ಆರ್‌ ದಾಖಲಿಸುವವರೆಗೆ ಮರೋತ್ತರ ಪರೀಕ್ಷಗೆ ಅವಕಾಶವಿಲ್ಲ ಎಂದು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು