ಬಸವಕಲ್ಯಾಣ: ಹಾಲು ತಗೆದುಕೊಂಡು ಹೋಗದ ಕೆಎಮ್ಎಫ್ ಕ್ರಮ ಖಂಡಿಸಿ ರೈತರು ನೂರಾರು ಲೀಟರ್ ಹಾಲು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದ ಪ್ರಸಂಗ ತಾಲೂಕಿನ ರಾಮತೀರ್ಥ ಗ್ರಾಮದಲ್ಲಿ ಜರುಗಿದೆ.
ಕಳೆದ 2 ದಿನಗಳಲ್ಲಿ ಹಾಲು ತಗೆದುಕೊಂಡು ಹೋಗುತ್ತಿಲ್ಲ ಎಂದು ಆಕ್ರೋಶಗೊಂಡ ರೈತರು ರಸ್ತೆ ಮೇಲೆ ಹಾಲು ಸುರಿದು ಕೆಎಮ್ಎಫ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಪ್ರಮುಖರು ಆದ ಗ್ರಾಪಂ ಸದಸ್ಯ ಈಶ್ವರ ಬೋಕ್ಕೆ ಮಾತನಾಡಿ, ಕೆಎಮ್ಎಫ್’ನಿಂದ ಹಾಲು ತಗೆದುಕೊಂಡು ಹೋಗದ ಕಾರಣ ರೈತರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಇದರಿಂದ ಸಾವಿರಾರು ರೂ.ನಷ್ಟ ಅನುಭವಿಸಬೇಕಾಗಿದೆ ಎಂದು ಅಳಲು ತೋಡಿಕೊಂಡರು.