ನವದೆಹಲಿ: ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಪಖ್ರೋ ರೇಂಜ್ ಹಗರಣದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಅರಣ್ಯ ಸಚಿವ ಮತ್ತು ಕಾಂಗ್ರೆಸ್ ನಾಯಕ ಹರಕ್ ಸಿಂಗ್ ರಾವತ್ ಮತ್ತು ಅವರ ಸೊಸೆ ಅನುಕೃತಿಗೂ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.
ಫೆಬ್ರವರಿ 29 ರಂದು ಹರಕ್ ಸಿಂಗ್ ರಾವತ್ ಮತ್ತು ಅನುಕೃತಿ ವಿಚಾರಣೆಗೆ ಬರುವಂತೆ ನೋಟಿಸ್ನಲ್ಲಿ ಜಾರಿ ನಿರ್ದೇಶನಾಲಯ ತಿಳಿಸಿದೆ.
ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 7 ರಂದು ಕೇಂದ್ರ ಸಂಸ್ಥೆ ಹರಕ್ ಸಿಂಗ್ ರಾವತ್ ಮತ್ತು ಅವರ ಸಂಬಂಧಿಗಳ ಕಚೇರಿ ಮತ್ತು ನಿವಾಸದ ಮೇಲೆ ದಾಳಿ ನಡೆಸಿ ಶೋಧಕಾರ್ಯ ನಡೆಸಿತ್ತು. ದಾಳಿಯ ವೇಳೆ ಸುಮಾರು 1.20 ಕೋಟಿ ರೂಪಾಯಿ ಮತ್ತು ವಿದೇಶಿ ಕರೆನ್ಸಿ, ಚಿನ್ನ ಮತ್ತು ಅಪಾರ ಪ್ರಮಾಣದ ದಾಖಲೆಗಳನ್ನು ಇಡಿ ವಶಕ್ಕೆ ಪಡೆದುಕೊಂಡಿದೆ.
ಈ ಬಗ್ಗೆ ಇಡಿ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ. ಮಾಜಿ ಡಿಎಫ್ಒ ಕಿಶನ್ ಚಂದ್ ಮತ್ತು ಮಾಜಿ ಅರಣ್ಯ ಅಧಿಕಾರಿ ಬ್ರಿಜ್ ಬಿಹಾರಿ ಶರ್ಮಾ ಅವರ ನಿವಾಸದ ಮೇಲೂ ಇಡಿ ದಾಳಿ ನಡೆಸಿತ್ತು.