News Karnataka Kannada
Tuesday, May 07 2024
ದೇಶ

ರಾಮ ಮಂದಿರವು ‘ಭರತವರ್ಷ ಪುನರ್ ನಿರ್ಮಾಣ’ದ ಆರಂಭ: ಮೋಹನ್ ಭಾಗವತ್

ಅಯೋಧ್ಯೆಯ ಜನ್ಮಸ್ಥಳದಲ್ಲಿ ರಾಮ್ ಲಲ್ಲಾನ ಪ್ರವೇಶ ಮತ್ತು ದೇವಾಲಯದ ಪ್ರಾಣ ಪ್ರತಿಷ್ಠಾ ಸಮಾರಂಭವು “ಭರತವರ್ಷದ ಪುನರ್ ನಿರ್ಮಾಣ’ದ ಅಭಿಯಾನದ ಆರಂಭವಾಗಿದೆ. ಇದು ಎಲ್ಲರ ಸಾಮರಸ್ಯ, ಏಕತೆ, ಪ್ರಗತಿ, ಶಾಂತಿ ಮತ್ತು ಯೋಗಕ್ಷೇಮವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ಅವರು ಹೇಳಿದ್ದಾರೆ.
Photo Credit : News Kannada

ನವದೆಹಲಿ: ಅಯೋಧ್ಯೆಯ ಜನ್ಮಸ್ಥಳದಲ್ಲಿ ರಾಮ್ ಲಲ್ಲಾನ ಪ್ರವೇಶ ಮತ್ತು ದೇವಾಲಯದ ಪ್ರಾಣ ಪ್ರತಿಷ್ಠಾ ಸಮಾರಂಭವು “ಭರತವರ್ಷದ ಪುನರ್ ನಿರ್ಮಾಣ’ದ ಅಭಿಯಾನದ ಆರಂಭವಾಗಿದೆ. ಇದು ಎಲ್ಲರ ಸಾಮರಸ್ಯ, ಏಕತೆ, ಪ್ರಗತಿ, ಶಾಂತಿ ಮತ್ತು ಯೋಗಕ್ಷೇಮವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ಅವರು ಹೇಳಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ ಲೇಖನದಲ್ಲಿ ಅನೇಕ ಸಂಗತಿಗಳ ಕುರಿತು ಮೋಹನ್ ಭಾಗವತ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕಾಗಿ “ಹಿಂದೂ ಸಮಾಜದ ನಿರಂತರ ಹೋರಾಟ” ವನ್ನು ಉಲ್ಲೇಖಿಸಿದ್ದಾರೆ ಮತ್ತು ವಿವಾದದ ಸಂಬಂಧದ ಉಂಟಾದ “ಘರ್ಷಣೆ ಮತ್ತು ಕಹಿ” ಇನ್ನು ಅಂತ್ಯಯಾಗಬೇಕು ಎಂದು ಅವರು ಹೇಳಿದ್ದಾರೆ.

ಹಲವು ವರ್ಷಗಳ ಕಾನೂನು ಹೋರಾಟದ ನಂತರ ಸುಪ್ರೀಂ ಕೋರ್ಟ್, 2019ರ ನವೆಂಬರ್ 9 ರಂದು “ಸತ್ಯ ಮತ್ತು ಸಂಗತಿಗಳನ್ನು” ಪರಿಶೀಲಿಸಿದ ನಂತರ ಮತ್ತು ಪ್ರಕರಣದ ಎಲ್ಲಾ ಪಕ್ಷಗಳ ವಾದಗಳನ್ನು ಆಲಿಸಿ, ಸಮತೋಲಿತ ತೀರ್ಪನ್ನು ಪ್ರಕಟಿಸಿತು ಎಂದು ಮೋಹನ್ ಭಾಗವತ್ ಅವರು ಹೇಳಿದ್ದಾರೆ.

ಧರ್ಮದ ದೃಷ್ಟಿಯಿಂದ ನೋಡುವುದಾದರೆ ಭಾರತೀಯ ಬಹುತೇಕ ಸಮಾಜಗಳಲ್ಲಿ ರಾಮ ಆರಾಧಿಸುವ ದೈವವಾಗಿದ್ದಾರೆ. ಈಗಲೂ ಅವರನ್ನು ಇಡೀ ಸಮಾಜವು ಆದರ್ಶ ಎಂದು ಒಪ್ಪಿಕೊಳ್ಳುತ್ತದೆ. ಆದ್ದರಿಂದ ಈಗ ವಿವಾದದ ಪರ ಮತ್ತು ವಿರುದ್ಧವಾಗಿ ಉದ್ಭವಿಸಿರುವ ಸಂಘರ್ಷವನ್ನು ಕೊನೆಗೊಳಿಸಬೇಕು. ಈ ನಡುವೆ ಎದ್ದಿರುವ ಕಹಿಯೂ ಕೊನೆಯಾಗಬೇಕು.  ಅಯೋಧ್ಯೆ ಎಂದರೆ ಯುದ್ಧ ಇಲ್ಲದ ನಗರ; ಸಂಘರ್ಷ ಮುಕ್ತ ಸ್ಥಳ. ಈ ಸಂದರ್ಭದಲ್ಲಿ, ಇಡೀ ದೇಶದಲ್ಲಿ, ಅಯೋಧ್ಯೆಯ ಪುನರ್ನಿರ್ಮಾಣವು ಈ ಸಮಯದ ಅಗತ್ಯವಾಗಿದೆ ಮತ್ತು ನಮ್ಮೆಲ್ಲರ ಕರ್ತವ್ಯವಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಸಂದರ್ಭವು ರಾಷ್ಟ್ರೀಯ ಹೆಮ್ಮೆಯ ಪುನರುತ್ಥಾನವನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು