News Karnataka Kannada
Monday, May 06 2024
ದೇಶ

ರಾಮನ ಭಜನೆ ಮೂಲಕ ಪ್ರಧಾನಿ ಮೋದಿ ಮನ ಗೆದ್ದ ಗಾಯಕಿ ಸ್ವಾತಿ ಮಿಶ್ರಾ

Mishra
Photo Credit : News Kannada

ದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭ ಆಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಕೋಟ್ಯಂತರ ಮಂದಿ ಕಾದಿದ್ದಾರೆ. ಈ ಸಂದರ್ಭದಲ್ಲಿ ಗಾಯಕಿ ಸ್ವಾತಿ ಮಿಶ್ರಾ ಅವರು ಹಾಡಿರುವ ರಾಮನ ಭಜನೆ ವೈರಲ್​ ಆಗಿದೆ.

‘ರಾಮ್​ ಆಯೆಂಗೆ..’ ಎಂಬ ಈ ಭಜನೆಯನ್ನು ಕೇಳಿ ಪ್ರಧಾನಿ ಮೋದಿ ಕೂಡ ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿರುವ ಅವರು, ‘ರಾಮ್​ ಲಲ್ಲಾನ ಸ್ವಾಗತದ ಸಮಯದಲ್ಲಿ ಸ್ವಾತಿ ಮಿಶ್ರಾ ಅವರ ಈ ಭಜನೆ ಮಂತ್ರಮುಗ್ಧಗೊಳಿಸುವ ರೀತಿಯಲ್ಲಿ ಇದೆ’ ಎಂದು ಬರೆದುಕೊಂಡಿದ್ದಾರೆ. ಸುಮಧುರ ಕಂಠ ಹೊಂದಿರುವ ಸ್ವಾತಿ ಮಿಶ್ರಾ ಅವರು ಮುಂಬೈನವರು. ತಮ್ಮ ಹಾಡುಗಳ ಮೂಲಕ ಅವರು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅಲ್ಲ್ದೇ ಸೋಶಿಯಲ್​ ಮೀಡಿಯಾದಲ್ಲೂ ಸ್ವಾತಿ ಮಿಶ್ರಾ ಆ್ಯಕ್ಟೀವ್​ ಆಗಿದ್ದಾರೆ.

ಅನೇಕ ಕವರ್​ ಸಾಂಗ್​ಗಳಿಗೆ ಸ್ವಾತಿ ಮಿಶ್ರಾ ಧ್ವನಿ ನೀಡಿದ್ದಾರೆ. ‘ರಾಮ್ ಆಯೆಂಗೆ..’ ಭಜನೆಯನ್ನು ಅವರು 2023ರ ಅಕ್ಟೋಬರ್​ನಲ್ಲಿ ರಿಲೀಸ್​ ಮಾಡಿದ್ದರು. ಈಗ ಇದರ ಬಗ್ಗೆ ನರೇಂದ್ರ ಮೋದಿ ಟ್ವೀಟ್​ ಮಾಡಿದ ಬಳಿಕ ವೀಕ್ಷಣೆ ಹೆಚ್ಚಾಗಿದೆ. ಸ್ವಾತಿ ಮಿಶ್ರ ಅವರ ಜನಪ್ರಿಯತೆ ಕೂಡ ದುಪ್ಪಟ್ಟಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು