ಇಂಫಾಲ: ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಸೋಮವಾರ ಅಪರಿಚಿತ ಶಸ್ತ್ರಸಜ್ಜಿತ ಗುಂಪು ಇಬ್ಬರು ಜನರನ್ನು ಕೊಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಕಾಂಗ್ಪೋಪಿ ಜಿಲ್ಲೆಯ ಕಾಂಗ್ಚುಪ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಹತ್ಯೆಯ ನಂತರ, ಬುಡಕಟ್ಟು ಏಕತೆಯ ಸಮಿತಿ, ಸದರ್ ಹಿಲ್ಸ್ ಕಾಂಗ್ಪೊಕ್ಪಿ ಇಡೀ ಕಾಂಗ್ಪೊಕ್ಪಿ ಜಿಲ್ಲೆಯಾದ್ಯಂತ 48 ಗಂಟೆಗಳ ಕಾಲ ಬಂದ್ ಗೆ ಕರೆ ನೀಡಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಕೋಟಿ ಕಾರ್ಯದರ್ಶಿ ತಂಗ್ಟಿನ್ಲೆನ್ ಹಾಕಿಪ್, ಕುಕಿಗಳ ಪ್ರಾಬಲ್ಯವಿರುವಲ್ಲಿಯೇ ಘಟನೆ ನಡೆದಿದೆ. ಇದು ಉದ್ದೇಶಪೂರ್ವಕ ದಾಳಿ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ. ಈ ಕೂಡಲೆ ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕೆಂದು ಕೋಟಿ ಒತ್ತಾಯಿಸಿದ್ದಾರೆ. ತಂಗ್ಮಿನ್ಲುನ್ ಹ್ಯಾಂಗ್ಶಿಂಗ್ ಮತ್ತು ಹೆನ್ಮಿನ್ಲೆನ್ ವೈಫೈ ಅವರ ಭೀಕರ ಹತ್ಯೆಯ ಪ್ರಕರಣ ಕೇಂದ್ರ ತನಿಖಾ ದಳಕ್ಕೆ ಹಸ್ತಾಂತರಿಸಬೇಕೆಂದು ಹೇಳಿದ್ದಾರೆ.