News Karnataka Kannada
Friday, May 17 2024
ದೇಶ

ಇಂಡಿಯಾನ್‌ ಆರ್ಮಿ ಮರಳಲು ಮಾಲ್ದೀವ್ಸ್‌ ಅಧ್ಯಕ್ಷ ಗಡುವು

"ಮಾ.10ರೊಳಗೆ ಮೊದಲ ಹಂತದ ಭಾರತದ ಸೇನಾ ಸಿಬ್ಬಂದಿಯನ್ನು ಮರಳಿ ಕಳಿಸಲಾಗುವುದು. ಮೇ 10ರೊಳಗೆ ಉಳಿದ ಸೇನಾ ಸಿಬ್ಬಂದಿ ದೇಶ ತೊರೆಯಬೇಕು’ ಎಂದು ಚೀನಾ ಕುಮ್ಮಕ್ಕಿನೊಂದಿಗೆ ಅಧಿಕಾರಕ್ಕೆ ಬಂದಿರುವ ಮಾಲ್ದೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜ್ಜು ಸವಾಲು ಹಾಕಿದ್ದಾರೆ.
Photo Credit : News Kannada

ಮಾಲೆ: “ಮಾ.10ರೊಳಗೆ ಮೊದಲ ಹಂತದ ಭಾರತದ ಸೇನಾ ಸಿಬ್ಬಂದಿಯನ್ನು ಮರಳಿ ಕಳಿಸಲಾಗುವುದು. ಮೇ 10ರೊಳಗೆ ಉಳಿದ ಸೇನಾ ಸಿಬ್ಬಂದಿ ದೇಶ ತೊರೆಯಬೇಕು’ ಎಂದು ಚೀನಾ ಕುಮ್ಮಕ್ಕಿನೊಂದಿಗೆ ಅಧಿಕಾರಕ್ಕೆ ಬಂದಿರುವ ಮಾಲ್ದೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜ್ಜು ಸವಾಲು ಹಾಕಿದ್ದಾರೆ.

ಇನ್ನೊಂದು ವಿಚಾರವೆಂದರೇ, ಒಟ್ಟು 81 ಮಂದಿ ಸಂಸದರು ಇರುವ ಸಂಸತ್‌ನಲ್ಲಿ ಅಧ್ಯಕ್ಷರ ಭಾಷಣ ಕೇಳಲು ಇದ್ದದ್ದು ಕೇವಲ 24 ಸದಸ್ಯರು ಮಾತ್ರ. ಉಳಿದ 56 ಮಂದಿ ಸದಸ್ಯರು ಬಹಿಷ್ಕರಿಸಿದ್ದರು.

ಕಳೆದ ವರ್ಷದ ಚುನಾವಣೆಯಲ್ಲಿ ಜಯಗಳಿಸಿದ ಬಳಿಕ ಮೊದಲ ಬಾರಿಗೆ ಸಂಸತ್‌ ಅಧಿವೇಶನ ಉದ್ದೇಶಿಸಿ ಮಾತನಾಡಿದ ಮುಯಿಜ್ಜು “ಮಾಲ್ಡೀವ್ಸ್‌ನ ಬಹುತೇಕರು ನನ್ನ ಆಡಳಿತವನ್ನು ಬೆಂಬಲಿಸುತ್ತಾರೆ. ವಿದೇಶಿ ಸೇನೆಯ ಉಪಸ್ಥಿತಿ ಕಿತ್ತೂಗೆಯುವ, ಹಿಂದೂ ಮಹಾ ಸಾಗರದಲ್ಲಿ ಕಳೆದು ಕೊಂಡಿರುವ ಮಾಲ್ದೀವ್ಸ್‌ಹಿಡಿತ ವನ್ನು ಮರುಸ್ಥಾಪಿಸುವ ಉದ್ದೇಶಕ್ಕೆ ಜನರ ಬೆಂಬಲ ಇದೆ’ ಎಂದು ಹೇಳಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು