News Karnataka Kannada
Thursday, May 02 2024
ಮಹಾರಾಷ್ಟ್ರ

ಥಾಣೆ: ಬಿಲ್ಲವರ ಅಸೋಸಿಯೇಷನ್ ಸದಸ್ಯ ಸುಧಾಕರ್ ಟಿ.ಅಂಚನ್ ಹೃದಯಾಘಾತದಿಂದ ನಿಧನ

Thane: Sudhakar T Anchan, member of Billavar Association, dies of cardiac arrest
Photo Credit : News Kannada

ಥಾಣೆ: ಬಿಲ್ಲವರ ಅಸೋಸಿಯೇಷನ್ ಮುಂಬೈನ ಸದಸ್ಯ, ಭಾರತ್ ಬ್ಯಾಂಕ್ ವಿಲೇಪಾರ್ಲೆ ಪೂರ್ವ ಶಾಖೆಯ ಉಪಪ್ರಬಂಧಕ ಸುಧಾಕರ್.ಟಿ ಅಂಚನ್ ಅವರು ಬುಧವಾರ ಹೃದಯಾಘಾತದಿಂದ ನಿಧನ ಹೊಂದಿದರು.

ಉಡುಪಿ ಜಿಲ್ಲೆಯ ಕಟಪಾಡಿ ನಿವಾಸಿಯಾಗಿರುವ ಸುಧಾಕರ್ ಟಿ ಅಂಚನ್ ಅವರು, ಊರಿನಲ್ಲಿ ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್ ಎಂಬವರ ಮಗನ ಮದುವೆಯಲ್ಲಿ ಪಾಲ್ಗೊಂಡು ವಾಪಾಸ್ ಮುಂಬೈಗೆ ರೈಲಿನಲ್ಲಿ ತೆರಳುತ್ತಿದ್ದರು. ಈ ವೇಳೆ ಥಾಣೆ ರೈಲ್ವೆ ನಿಲ್ದಾಣದಲ್ಲಿ ರೈಲಿನಿಂದ ಇಳಿಯುತ್ತಿದ್ದಾಗ ಅವರಿಗೆ ಏಕಾಏಕಿ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ.

ಮೃತ ಸುಧಾಕರ್ ಅವರು ರಾಜಶೇಖರ್ ಕೋಟ್ಯಾನ್ ಅವರ ಭಾವ ಎಂದು ತಿಳಿದುಬಂದಿದೆ. ಮೃತರ ತಂದೆ ತಾಯಿ, ಸಂಸಾರ ಹಾಗೂ ಹತ್ತಿರದ ಬಂಧುಗಳು ಊರಲ್ಲಿ ಇರವುದರಿಂದ ನಾಳೆ ಉಡುಪಿಯ ಕಟಪಾಡಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲದಿಂದ ತಿಳಿದು ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು