ಪುಣೆ: ಕೇಂದ್ರ ಸರ್ಕಾರ ಇಡಿ ಮೂಲಕ ತನಿಖೆ ಆರಂಭಿಸಿದ ಕಾರಣ ಎನ್ಸಿಪಿಯ ಕೆಲ ಸದಸ್ಯರು ಪಕ್ಷ ತೊರೆದರು ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಕಳೆದ ತಿಂಗಳು ಶಿವಸೇನೆ-ಬಿಜೆಪಿ ಸರ್ಕಾರ ಸೇರಿದ ತಮ್ಮ ಸೋದರಳಿಯ ಅಜಿತ್ ಪವಾರ್ ಅವರ ಹೆಸರನ್ನು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದರು. ಅಭಿವೃದ್ಧಿಯ ಕಾರಣಕ್ಕಾಗಿ ಸರ್ಕಾರದ ಭಾಗವಾಗಲು ಬಯಸುತ್ತೇವೆ ಎಂಬ ಅವರ ಹೇಳಿಕೆ ನಿಜವಲ್ಲ ಎಂದು ಪರೋಕ್ಷವಾಗಿ ಟಾಂಗ್ ನೀಡಿದರು.
ಕೆಲವು ಸದಸ್ಯರು ನಮ್ಮನ್ನು ತೊರೆದರು. ಬಿಜೆಪಿ ಶಿವಸೇನೆ ಸರ್ಕಾರಕ್ಕೆ ನಮ್ಮ ಪಕ್ಷದಿಂದ ಸೇರ್ಪಡೆಗೊಂಡವರು ಅಭಿವೃದ್ಧಿಗಾಗಿ ನಾವು ಆ ಸರ್ಕಾರದ ಭಾಗವಾಗಿದ್ದೇವೆ ಎಂದು ಹೇಳುತ್ತಾರೆ. ವಾಸ್ತವದಲ್ಲಿ ಅವರ ವಿರುದ್ಧ ಇಡಿ ತನಿಖೆ ಭಯದಿಂದ ಪಕ್ಷ ತೊರೆದಿದ್ದಾರೆ ಎಂದರು.