News Karnataka Kannada
Tuesday, May 07 2024
ಮಹಾರಾಷ್ಟ್ರ

ಇಡಿ ತನಿಖೆಯ ಭಯದಿಂದ ಪಕ್ಷ ತೊರೆದರು: ಅಜಿತ್‌ ಪವಾರ್‌ ವಿರುದ್ಧ ಶರದ್‌ ವಾಗ್ದಾಳಿ

Sharad Pawar attacks Ajit Pawar, says he left party fearing ED probe
Photo Credit : IANS

ಪುಣೆ: ಕೇಂದ್ರ ಸರ್ಕಾರ ಇಡಿ ಮೂಲಕ ತನಿಖೆ ಆರಂಭಿಸಿದ ಕಾರಣ ಎನ್‌ಸಿಪಿಯ ಕೆಲ ಸದಸ್ಯರು ಪಕ್ಷ ತೊರೆದರು ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಹೇಳಿದ್ದಾರೆ.

ಕಳೆದ ತಿಂಗಳು ಶಿವಸೇನೆ-ಬಿಜೆಪಿ ಸರ್ಕಾರ ಸೇರಿದ ತಮ್ಮ ಸೋದರಳಿಯ ಅಜಿತ್ ಪವಾರ್ ಅವರ ಹೆಸರನ್ನು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದರು. ಅಭಿವೃದ್ಧಿಯ ಕಾರಣಕ್ಕಾಗಿ ಸರ್ಕಾರದ ಭಾಗವಾಗಲು ಬಯಸುತ್ತೇವೆ ಎಂಬ ಅವರ ಹೇಳಿಕೆ ನಿಜವಲ್ಲ ಎಂದು ಪರೋಕ್ಷವಾಗಿ ಟಾಂಗ್‌ ನೀಡಿದರು.

ಕೆಲವು ಸದಸ್ಯರು ನಮ್ಮನ್ನು ತೊರೆದರು. ಬಿಜೆಪಿ ಶಿವಸೇನೆ ಸರ್ಕಾರಕ್ಕೆ ನಮ್ಮ ಪಕ್ಷದಿಂದ ಸೇರ್ಪಡೆಗೊಂಡವರು ಅಭಿವೃದ್ಧಿಗಾಗಿ ನಾವು ಆ ಸರ್ಕಾರದ ಭಾಗವಾಗಿದ್ದೇವೆ ಎಂದು ಹೇಳುತ್ತಾರೆ. ವಾಸ್ತವದಲ್ಲಿ ಅವರ ವಿರುದ್ಧ ಇಡಿ ತನಿಖೆ ಭಯದಿಂದ ಪಕ್ಷ ತೊರೆದಿದ್ದಾರೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು