ಸತಾರಾ: ಸುಮಾರು 36 ಕಾರ್ಮಿಕರು ಮತ್ತು ಕೆಲವು ಮಕ್ಕಳನ್ನು ಹೊತ್ತ ಟೆಂಪೊವೊಂದು ಮಹಾಬಲೇಶ್ವರ ಬೆಟ್ಟದ ಮುಗ್ದೇವ್ ಗ್ರಾಮದ ಬಳಿ ಕಣಿವೆಗೆ ಉರುಳಿ ಬಿದ್ದಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಅಪಘಾತದಲ್ಲಿ ಎಂಟು ಕಾರ್ಮಿಕರು ಮತ್ತು ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಟೆಂಪೊ ಅಕೋಲಾ ಮತ್ತು ಬುಲ್ಧಾನಾ ಜಿಲ್ಲೆಗಳಿಂದ ಕಾರ್ಮಿಕರನ್ನು ಸತಾರಾದಲ್ಲಿ ಕೆಲಸಕ್ಕಾಗಿ ಕರೆದೊಯ್ಯುತ್ತಿತ್ತು.
ಗಂಭೀರವಾಗಿ ಗಾಯಗೊಂಡ ಇಬ್ಬರು ಅಪ್ರಾಪ್ತ ವಯಸ್ಕರನ್ನು ಚಿಕಿತ್ಸೆಗಾಗಿ ಸತಾರಾ ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. ಘಟನೆಯ ಬಗ್ಗೆ ತಿಳಿದ ಸಹ್ಯಾದ್ರಿ ಚಾರಣಿಗರಾದ ಸಂಜಯ್ ಪಾರ್ಟೆ, ದೀಪಕ್ ಜಾಧವ್ ಮತ್ತು ಸ್ಥಳೀಯ ಗ್ರಾಮಸ್ಥರು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.