ಮುಂಬೈ: ಸುಮಾರು 101 ದಿನಗಳ ಕಾಲ ಜೈಲಿನಲ್ಲಿ ಕಳೆದ ನಂತರ, ಆಗಸ್ಟ್ 1 ರಂದು ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟ ಶಿವಸೇನೆ (ಯುಟಿ) ಸಂಸದ ಸಂಜಯ್ ರಾವತ್ ಅವರಿಗೆ ಮುಂಬೈ ವಿಶೇಷ ನ್ಯಾಯಾಲಯವು ಬುಧವಾರ ಜಾಮೀನು ನೀಡಿದೆ.
ಗೋರೆಗಾಂವ್ ನ ಪತ್ರಾ ಚಾಲ್ ಪುನರಾಭಿವೃದ್ಧಿ ಪ್ರಕರಣದಲ್ಲಿ ಉದ್ಭವಿಸಿದ ಅಕ್ರಮ ಹಣ ವರ್ಗಾವಣೆ ಹಗರಣಕ್ಕೆ ಸಂಬಂಧಿಸಿದಂತೆ ಜುಲೈ 31 ರಂದು ಜಾರಿ ನಿರ್ದೇಶನಾಲಯವು ರಾವತ್ ಅವರ ಮೇಲೆ ದಾಳಿ ನಡೆಸಿ ಮರುದಿನ (ಆಗಸ್ಟ್ 1) ಅವರನ್ನು ಬಂಧಿಸಿತ್ತು.
ಇಡಿ ಈ ತೀರ್ಪನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂಬ ಊಹಾಪೋಹಗಳಿದ್ದರೂ ವಿಶೇಷ ಪಿಎಂಎಲ್ಎ ನ್ಯಾಯಾಲಯವು ಫೈರ್ಬ್ರಾಂಡ್ ನಾಯಕನಿಗೆ ಜಾಮೀನು ನೀಡಿದೆ.