News Karnataka Kannada
Friday, May 17 2024
ಮಹಾರಾಷ್ಟ್ರ

ನನ್ನಿಂದ ಎಲ್ಲವನ್ನು ಕಿತ್ತುಕೊಂಡಿದ್ದಾನೆ: ಗೌತಮ್ ಸಿಂಘಾನಿಯಾ ಕುರಿತು ಹೀಗೆ ಹೇಳಿದ್ಯಾರು

He has taken everything away from me: Who said this about Raymond founder Singhania
Photo Credit : News Kannada

ಮುಂಬೈ: ಬಹುಕೋಟಿ ಉದ್ಯಮಿ ರೇಮಂಡ್ ಗ್ರೂಪ್‌ನ ಸಂಸ್ಥಾಪಕ ಮತ್ತು ಹಾಲಿ ಅಧ್ಯಕ್ಷ ಗೌತಮ್ ಸಿಂಘಾನಿಯಾ ತಮ್ಮ ಪತ್ನಿ ನವಾಜ್ ಮೋದಿ ಅವರಿಗೆ ಡಿವೋರ್ಸ್‌ ನೀಡಿದ್ದಾರೆ. ಈ ವಿಚಾರದಲ್ಲಿ ಸಿಂಘಾನಿಯಾ ತಂದೆ ವಿಜಯಪತ್ ಸಿಂಘಾನಿಯಾ ಸೊಸೆಗೆ ಬೆಂಬಲ ಕೊಟ್ಟಿದ್ದಾರೆ.

ಒಂದು ವೇಳೆ ನವಾಜ್ ಮೋದಿ ನಿಮ್ಮನ್ನು ಸಂಪರ್ಕಿಸಿದರೆ ತಮ್ಮ ಮಗನೊಂದಿಗೆ ಮಾತನಾಡಲು ಸಿದ್ಧರಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ವಿಜಯಪತ್‌ ನಾನು ಅವರನ್ನು ಭೇಟಿಯಾಗಲು ಮುಕ್ತನಾಗಿರುತ್ತೇನೆ. ಆದರೆ, ಗೌತಮ್ ಸಿಂಘಾನಿಯಾ ಭೇಟಿಯಾಗುವುದರಲ್ಲಿ ಅರ್ಥವಿಲ್ಲ. ಏಕೆಂದರೆ ಅವನು ನನ್ನ ಮಾತನ್ನು ಕೇಳುವುದಿಲ್ಲ. ಅವನಿಗೆ ಇಷ್ಟವಿಲ್ಲದದ್ದನ್ನು ನಾನು ಹೇಳಿದರೆ, ಅವನು ನನ್ನ ಮೇಲೆ ಕಿರುಚಬಹುದು, ನಿಂದಿಸಬಹುದು. ಅವನು ಈ ಎಲ್ಲಾ ರೀತಿಯ ಕೆಲಸಗಳನ್ನು ಮಾಡುತ್ತಾನೆ. ಆದ್ದರಿಂದ, ನಾನು ಬಹುಶಃ ನನ್ನಿಂದ ಸಾಧ್ಯವಾದಷ್ಟು ದೂರವಿರಲು ಪ್ರಯತ್ನಿಸುತ್ತೇನೆ ಎಂದೂ ಹೇಳಿದ್ದಾರೆ.

ಮಗ ಗೌತಮ್ ತನ್ನಿಂದ ಎಲ್ಲವನ್ನೂ ಕಿತ್ತುಕೊಂಡಿದ್ದಾನೆ ಮತ್ತು ಅವನು ಈಗ ಉಳಿದಿರುವ ಅಲ್ಪ ಹಣದಿಂದ ಬದುಕುತ್ತಿದ್ದಾನೆ ಎಂದೂ ಹೇಳಿದ್ದಾರೆ. ಹಾಗೆ, ತಮ್ಮ ಮಕ್ಕಳಿಗೆ ಎಲ್ಲವನ್ನೂ ನೀಡುವ ಮೊದಲು, ನನ್ನಂತಹ ಪೋಷಕರು ಸ್ವಲ್ಪ ಗಂಭೀರವಾಗಿ ಯೋಚಿಸಬೇಕು ಎಂದೂ ಸಲಹೆ ನೀಡಿದ್ದಾರೆ.

ಮಕ್ಕಳಿಗೆ ಬೇಕಾದುದನ್ನು ನೀಡಿ. ನಾನು ನಿಮಗೆ ಕೊಡಬೇಡಿ ಎಂದು ಹೇಳುತ್ತಿಲ್ಲ ಆದರೆ, ನೀವು ಸತ್ತ ನಂತರ ಕೊಡಿ ಎಂದು ಮಾತ್ರ ಹೇಳುತ್ತಿದ್ದೇನೆ. ನಿಮ್ಮ ಜೀವಿತಾವಧಿಯಲ್ಲಿ ಅದನ್ನು ನೀಡಬೇಡಿ. ಏಕೆಂದರೆ ನೀವು ಭಾರಿ ಬೆಲೆ ತೆರಬೇಕಾಗಬಹುದು ಎಂದೂ ವಿಜಯಪತ್ ಸಿಂಘಾನಿಯಾ ಪೋಷಕರಿಗೆ ಪ್ರಜ್ಞಾಪೂರ್ವಕ ಸಲಹೆ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು