ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಮುಂಬೈ ಮಾತೋಶ್ರೀ’ ಬಂಗಲೆಯಲ್ಲಿ ನಾಲ್ಕು ಅಡಿ ಉದ್ದದ ನಾಗರಹಾವು ಪತ್ತೆಯಾಗಿದೆ.
ಭಾನುವಾರ ಮಧ್ಯಾಹ್ನ 1.30 ರ ಸುಮಾರಿಗೆ ಹಾವು ಕಂಡುಬಂದ ಹಿನ್ನೆಲೆಯಲ್ಲಿ ಉರಗ ರಕ್ಷಕ ಅತುಲ್ ಕಾಂಬ್ಳೆ ಅವರಿಗೆ ಕರೆ ಮಾಡಲಾಗಿದೆ ವಿಷಯ ತಿಳಿದು ಕೂಡಲೇ ಕಾರ್ಯಪ್ರವೃತ್ತರಾದ ಅವರು ತಮ್ಮ ತಂಡದೊಂದಿಗೆ ಠಾಕ್ರೆ ನಿವಾಸಕ್ಕೆ ಬಂದು ಮನೆಯೊಳಗಿದ್ದ ನಾಗರ ಹಾವನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.
ರಕ್ಷಣಾ ಕಾರ್ಯಾಚರಣೆಯ ದೃಶ್ಯಗಳು ಅಂತರ್ಜಾಲದಲ್ಲಿ ವೈರಲ್ ಆಗಿದ್ದು. ವೀಡಿಯೊದಲ್ಲಿ, ಉದ್ಧವ್ ಠಾಕ್ರೆ ಅವರ ಕಿರಿಯ ಮಗ ತೇಜಸ್ ಠಾಕ್ರೆ ಕೂಡಾ ಸ್ಥಳದಲ್ಲಿ ಇದ್ದು. ಹಾವಿನ ರಕ್ಷಣಾ ಕಾರ್ಯಾಚರಣೆ ನಡೆಸಿದ ವೇಳೆ ತಂದೆ ಮಗ ಇಬ್ಬರೂ ಸ್ಥಳದಲ್ಲಿಯೇ ಇದ್ದು ರಕ್ಷಣಾ ಕಾರ್ಯಾಚರಣೆಯನ್ನು ವೀಕ್ಷಣೆ ಮಾಡಿದ್ದಾರೆ.
ನಾಗರಹಾವು ರಕ್ಷಣಾ ಕಾರ್ಯಾಚರಣೆ ಬಗ್ಗೆ ವಿವರಿಸಿರುವ ಕಾಂಬ್ಳೆ, ನಾನು ಠಾಕ್ರೆ ನಿವಾಸದ ಆವರಣವನ್ನು ಪರಿಶೀಲಿಸಿದೆ. ಅಂತಿಮವಾಗಿ ಬಂಗಲೆಯ ಕಾಂಪೌಂಡ್ನಲ್ಲಿರುವ ನೀರಿನ ತೊಟ್ಟಿಯ ಹಿಂದೆ ತುಂಬಾ ಹೆದರಿ ಅವಿತಿತ್ತು ಎಂದು ಹೇಳಿದ್ದಾರೆ. ಕಾಂಬ್ಳೆ 15 ವರ್ಷಗಳಲ್ಲಿ ಮುಂಬೈ ನಗರದಲ್ಲಿ ಸುಮಾರು 9,000 ಕ್ಕೂ ಹೆಚ್ಚು ಹಾವುಗಳು ಮತ್ತು ಇತರ ಸರೀಸೃಪಗಳನ್ನು ರಕ್ಷಿಸಿದ್ದಾರೆ.
ಮುಂಬೈ ಮೆಟ್ರೋ ಲೈನ್ಗಳ ಕಾಮಗಾರಿಯಿಂದ ಅನೇಕ ಹಾವುಗಳು ಅವುಗಳ ವಾಸಸ್ಥಾನದಿಂದ ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿವೆ . ಮೆಟ್ರೊ ಕಾಮಗಾರಿಯಿಂದ ಹಾವು ಮಾತ್ರವಲ್ಲ, ಚಿರತೆ ಜನವಸತಿ ಪ್ರದೇಶಗಳಿಗೆ ಬರಬಹುದು ಎಂದು ಹೇಳಿದ್ದಾರೆ.
Dangerous cobra was found in #Matoshree's parking slot. #snake #cobra #Mumbai #Maharashtra #UddhavThackeray @OfficeofUT @UdhavThackeraypic.twitter.com/AfTQsIKLrr
— Priyathosh Agnihamsa (@priyathosh6447) August 7, 2023